Tuesday, January 13 2026 | 03:58:22 AM
Breaking News

ಒಳಚರಂಡಿ ನಿರ್ಮಿಸಲು ಅರ್ಜಿ: ಸ್ಥಳೀಯರ ಮನವಿಗೆ ಕೂಡಲೇ ಸ್ಪಂದಿಸಿದ ಅಧಿಕಾರಿಗಳು

Connect us on:

ಕರ್ನಾಟಕ ರಾಜ್ಯದ ಬೀದರ್ ಜಿಲ್ಲೆಯ ಮಾರ್ಖಲ್ ಗ್ರಾಮ ಪಂಚಾಯತ್ ವ್ಯಾಪ್ತಿಗೆ ಒಳಪಡುವ ಬೆನಕನಳ್ಳಿಯಲ್ಲಿ ಒಳಚರಂಡಿ ವ್ಯವಸ್ಥೆಯ ಕೊರತೆಯಿಂದಾಗಿ ಕೊಳಕು, ನಿಂತ ನೀರಿನಲ್ಲಿ ಗಲೀಜು ಹೆಚ್ಚಾಗಿ ದುರ್ನಾತ ಹರಡುತ್ತಿದ್ದ ಕಾರಣ ವಿವಿಧ ಸಾಂಕ್ರಾಮಿಕ ರೋಗಗಳ ಭೀತಿ ಕಾಡುತ್ತಿದೆ ಎಂದು ಸ್ಥಳೀಯರು ಸಂಬಂಧಪಟ್ಟ ಇಲಾಖೆಗೆ ಅರ್ಜಿ ನೀಡಿದ್ದರು.

ಅರ್ಜಿಯಲ್ಲಿ ಸಮಸ್ಯೆಯನ್ನು ಪರಿಹರಿಸಲು ಶೀಘ್ರ ಮತ್ತು ಸಂಪೂರ್ಣವಾಗಿ ಪ್ರದೇಶದ ಪರಿಶೀಲನೆ ನಡೆಸಿ, ಸಮಸ್ಯೆಯನ್ನು ಶಾಶ್ವತವಾಗಿ ಪರಿಹರಿಸಲು ಕಾಂಕ್ರೀಟ್ ಒಳಚರಂಡಿಯನ್ನು ನಿರ್ಮಿಸಬೇಕು ಹಾಗೂ ತೀವ್ರ ಸೊಳ್ಳೆಗಳ ಹಾವಳಿ ನಿಭಾಯಿಸಲು ತಕ್ಷಣದ ರೋಗವಾಹಕ-ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಗ್ರಾಮದ ನಿವಾಸಿಯಾದ ಶ್ರೀ ಸಾಯಿನಾಥ ಅವರು ಮನವಿ ಮಾಡಿದ್ದರು.

ಮೊದಲು

ಹಲವಾರು ವರ್ಷಗಳಿಂದ ನಿರಂತರವಾಗಿ ಕೊಳಕು, ನಿಂತ ನೀರಿನಿಂದ ತುಂಬಿಹೋದ ಕಾರಣ ಅದು ತೆರೆದ ಒಳಚರಂಡಿಯಾಗಿ ಮಾರ್ಪಾಡಾಗಿದ್ದು, ಇದು ನನ್ನ ಕುಟುಂಬ ಮತ್ತು ನೆರೆಹೊರೆಯವರಿಗೆ ಅತ್ಯಂತ ನೈರ್ಮಲ್ಯರಹಿತ ಮತ್ತು ಅಪಾಯಕಾರಿ ವಾತಾವರಣವನ್ನು ಸೃಷ್ಟಿಸಿದೆ. ನಿಂತ ನೀರು ಸೊಳ್ಳೆಗಳ ತಾಣವಾಗಿ, ಡೆಂಗ್ಯೂ, ಮಲೇರಿಯಾ ಮತ್ತು ಚಿಕನ್‌ ಗುನ್ಯಾದಂತಹ ರೋಗಗಳ ಹರಡುವ ಭೀತಿ ಸಾರ್ವಜನಿಕರಿಗೆ ಹೆಚ್ಚಾಗಿದೆ ಎಂದು ಅರ್ಜಿಯಲ್ಲಿ ಸಮಸ್ಯೆಗಳನ್ನು ಉಲ್ಲೇಖಿಸಿದ್ದರು.

ಅರ್ಜಿದಾರರ ಮನವಿಗೆ ಸ್ಪಂದಿಸಿದ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹಾಗೂ ಸಿಬ್ಬಂದಿ ಸ್ಥಳಕ್ಕೆ ಶೀಘ್ರ ಭೇಟಿ ನೀಡಿ ಕ್ರಮ ಕೈಗೊಂಡರು. ಪ್ರಸ್ತುತ ಕಸದ ರಾಶಿ ತೆರವುಗೊಳಿಸಿ, ರಸ್ತೆಗಳಲ್ಲಿನ ಗುಂಡಿಗಳನ್ನು ಮುಚ್ಚಲಾಗಿದೆ. ಸೊಳ್ಳೆಗಳ ಹಾವಳಿಯಿಂದ ಬೇಸತ್ತಿದ್ದ ಜನರ ಮುಖದಲ್ಲಿ ಮಂದಹಾಸ ಮೂಡಿದೆ ಮತ್ತು ಅಧಿಕಾರಿಗಳ ತ್ವರಿತ ಸ್ಪಂದನೆಗೆ ಅರ್ಜಿದಾರರು ಹಾಗೂ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ನಂತರ

About Matribhumi Samachar

Check Also

ಶ್ರೀ ಎಸ್. ಸುರೇಶ್ ಕುಮಾರ್ ಅವರ ಸ್ಪೂರ್ತಿದಾಯಕ ಸೈಕ್ಲಿಂಗ್ ಸಾಧನೆಯನ್ನು ಅಭಿನಂದಿಸಿದ ಪ್ರಧಾನಮಂತ್ರಿ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು, ಬೆಂಗಳೂರಿನಿಂದ ಕನ್ಯಾಕುಮಾರಿಯವರೆಗೆ ಸೈಕಲ್ ನಲ್ಲಿ ಪಯಣಿಸಿ ಯಶಸ್ವಿಯಾಗಿ ತಲುಪಿದ ಶ್ರೀ ಎಸ್. …