Tuesday, December 09 2025 | 12:57:06 AM
Breaking News

ಮಧ್ಯಪ್ರದೇಶದಲ್ಲಿ ಪ್ರಸಾರಕ್ಕೆ ಉತ್ತೇಜನ: ಕೇಂದ್ರ ಸರ್ಕಾರವು ಪ್ರಸಾರ ಮೂಲಸೌಕರ್ಯ ಮತ್ತು ಜಾಲ ಅಭಿವೃದ್ಧಿ (ಬಿ ಐ ಎನ್ ಡಿ) ಯೋಜನೆಯಡಿ ಉಜ್ಜಯಿನಿಯಲ್ಲಿ ಆಕಾಶವಾಣಿ ಕೇಂದ್ರವನ್ನು ಸ್ಥಾಪಿಸಲಿದೆ

Connect us on:

ಕೇಂದ್ರ ವಾರ್ತಾ ಮತ್ತು ಪ್ರಸಾರ ಹಾಗೂ ಸಂಸದೀಯ ವ್ಯವಹಾರಗಳ ರಾಜ್ಯ ಸಚಿವರಾದ ಡಾ. ಎಲ್. ಮುರುಗನ್ ಅವರು ಮಧ್ಯಪ್ರದೇಶದ ಮುಖ್ಯಮಂತ್ರಿ ಡಾ. ಮೋಹನ್ ಯಾದವ್ ಅವರನ್ನು ನವದೆಹಲಿಯ ತಮ್ಮ ನಿವಾಸದಲ್ಲಿ ಭೇಟಿಯಾದರು.

ಮಧ್ಯಪ್ರದೇಶದಲ್ಲಿ ಪ್ರಸ್ತುತ ನಡೆಯುತ್ತಿರುವ ಮತ್ತು ಭವಿಷ್ಯದ ಅಭಿವೃದ್ಧಿ ಉಪಕ್ರಮಗಳಿಗೆ ಸಂಬಂಧಿಸಿದ ವಿಷಯಗಳ ಮೇಲೆ ಸಭೆ ಕೇಂದ್ರೀಕರಿಸಿದರು. ಮಾಧ್ಯಮ ಸಂಪರ್ಕ, ಸಾರ್ವಜನಿಕ ಸಂವಹನ ಮತ್ತು ಪ್ರಸಾರ ಮೂಲಸೌಕರ್ಯ ಸೇರಿದಂತೆ ಪ್ರಮುಖ ಕ್ಷೇತ್ರಗಳಲ್ಲಿ ಕೇಂದ್ರ ಮತ್ತು ರಾಜ್ಯಗಳ ನಡುವಿನ ಸಹಯೋಗವನ್ನು ಬಲಪಡಿಸುವ ಮಾರ್ಗಗಳ ಕುರಿತು ನಾಯಕರು ಚರ್ಚಿಸಿದರು. ಆಕಾಶವಾಣಿ ಮತ್ತು ದೂರದರ್ಶನದಂತಹ ಕೇಂದ್ರ ಮಾಧ್ಯಮ ವೇದಿಕೆಗಳು ಮಧ್ಯಪ್ರದೇಶದ ಅಭಿವೃದ್ಧಿ ಕಥೆಗಳನ್ನು ಹೇಗೆ ಮತ್ತಷ್ಟು ವರ್ಧಿಸಬಹುದು ಎಂಬುದರ ಕುರಿತು ವಿಶೇಷ ಗಮನ ನೀಡಲಾಯಿತು.

ಉಜ್ಜಯಿನಿಯಲ್ಲಿ ಹೊಸ ಆಕಾಶವಾಣಿ ಕೇಂದ್ರ

ಉಜ್ಜಯಿನಿಯಲ್ಲಿ ಹೊಸ ಆಕಾಶವಾಣಿ ಕೇಂದ್ರ ಸ್ಥಾಪನೆಯ ಕುರಿತು ಸಭೆಯಲ್ಲಿ ಚರ್ಚೆ ನಡೆಯಿತು, ಇದನ್ನು ಕೇಂದ್ರದ ಪ್ರಸಾರ ಮೂಲಸೌಕರ್ಯ ಮತ್ತು ಜಲ ಅಭಿವೃದ್ಧಿ (ಬಿ ಐ ಎನ್ ಡಿ) ಯೋಜನೆಯಡಿಯಲ್ಲಿ ಬೆಂಬಲಿಸಲಾಗುತ್ತದೆ. ಪ್ರಾದೇಶಿಕ ಪ್ರಸಾರವನ್ನು ಬಲಪಡಿಸುವುದು, ಸಾಂಸ್ಕೃತಿಕ ಪರಂಪರೆಯನ್ನು ಸಂರಕ್ಷಿಸುವುದು ಮತ್ತು ಮಧ್ಯಪ್ರದೇಶದ ಜನರಿಗೆ ಸಕಾಲಿಕ ಮಾಹಿತಿಯನ್ನು ಪ್ರಸಾರ ಮಾಡುವುದು ಹೊಸ ಕೇಂದ್ರದ ಗುರಿಯಾಗಿದೆ. ಬಿ ಐ ಎನ್ ಡಿ ಯೋಜನೆಯು ಪ್ರಸಾರ ಭಾರತಿಗೆ ಅದರ ಪ್ರಸಾರ ಮೂಲಸೌಕರ್ಯದ ವಿಸ್ತರಣೆ ಮತ್ತು ಉನ್ನತೀಕರಣ, ವಿಷಯ ಅಭಿವೃದ್ಧಿ ಮತ್ತು ಸಿವಿಲ್ ಕಾಮಗಾರಿಗಳಿಗೆ ಸಂಬಂಧಿಸಿದ ವೆಚ್ಚಗಳಿಗಾಗಿ ಆರ್ಥಿಕ ನೆರವು ಒದಗಿಸುವ ಗುರಿಯನ್ನು ಹೊಂದಿದೆ.

ದೃಢವಾದ ಪ್ರಸಾರ ಮೂಲಸೌಕರ್ಯದ ಅಭಿವೃದ್ಧಿ

ರಾಜ್ಯದಲ್ಲಿ, ವಿಶೇಷವಾಗಿ ಸೌಲಭ್ಯ ವಂಚಿತ ಮತ್ತು ಮಹತ್ವಾಕಾಂಕ್ಷಿ ಜಿಲ್ಲೆಗಳಲ್ಲಿ ಬಲಿಷ್ಠ ಪ್ರಸಾರ ಮೂಲಸೌಕರ್ಯದ ಅಭಿವೃದ್ಧಿಗೆ ನಾಯಕರು ಇಬ್ಬರೂ ತಮ್ಮ ಬದ್ಧತೆಯನ್ನು ಪುನರುಚ್ಚರಿಸಿದರು. ರಾಜ್ಯದಾದ್ಯಂತ ನಾಗರಿಕರಿಗೆ ಮಾಹಿತಿ ಮತ್ತು ಸರ್ಕಾರಿ ಸಂವಹನದ ಕೊನೆಯ ಮೈಲಿಯ ವಿತರಣೆಯನ್ನು ಖಚಿತಪಡಿಸಿಕೊಳ್ಳುವಲ್ಲಿ ಸುಧಾರಿತ ಸಂಪರ್ಕ ಮತ್ತು ಆಧುನೀಕೃತ ಸೌಲಭ್ಯಗಳು ಪ್ರಮುಖ ಪಾತ್ರ ವಹಿಸುತ್ತವೆ. ವಿಕಸಿತ ಭಾರತದ ದೃಷ್ಟಿಕೋನಕ್ಕೆ ಕೊಡುಗೆ ನೀಡಲು ಮತ್ತು ಸವಲತ್ತುಗಳು ತಳಮಟ್ಟದವರೆಗೆ ತಲುಪುವುದನ್ನು ಖಚಿತಪಡಿಸಿಕೊಳ್ಳಲು ಕೇಂದ್ರ ಮತ್ತು ಮಧ್ಯಪ್ರದೇಶದ ನಡುವಿನ ಸಹಕಾರವನ್ನು ಹಲವಾರು ಕ್ಷೇತ್ರಗಳಲ್ಲಿ ಗಾಢವಾಗಿಸಲು ಪರಸ್ಪರ ಬದ್ಧತೆಯೊಂದಿಗೆ ಸಭೆ ಮುಕ್ತಾಯವಾಯಿತು.

ಮಧ್ಯಪ್ರದೇಶ ಬಿಜೆಪಿ ಅಧ್ಯಕ್ಷ ಶ್ರೀ ಹೇಮಂತ್ ಖಂಡೇಲವಾಲ್, ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಕಾರ್ಯದರ್ಶಿ ಶ್ರೀ ಸಂಜಯ್ ಜಾಜು, ಆಕಾಶವಾಣಿ ಮಹಾನಿರ್ದೇಶಕಿ ಡಾ. ಪ್ರಜ್ಞಾ ಪಲಿವಾಲ್ ಗೌರ್ ಮತ್ತು ಇತರ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು. ಅವರ ಉಪಸ್ಥಿತಿಯು ಸರ್ಕಾರದ ಅಭಿವೃದ್ಧಿ ದೃಷ್ಟಿಕೋನವನ್ನು ಮುನ್ನಡೆಸುವಲ್ಲಿ ಸಾಂಸ್ಥಿಕ ಸಮನ್ವಯದ ಮಹತ್ವವನ್ನು ಒತ್ತಿಹೇಳುತ್ತದೆ.

About Matribhumi Samachar

Check Also

ಪುತ್ತೂರು ಮಹಾಲಿಂಗೇಶ್ವರ ದೇವಾಲಯದ ಅಭಿವೃದ್ಧಿಗೆ ಸಂಬಂಧಿಸಿದ ಯಾವುದೇ ಯೋಜನೆಯು ಪ್ರಸ್ತುತ ಪ್ರಶಾದ್ ಯೋಜನೆಯಡಿ ಪರಿಗಣನೆಯಲ್ಲಿಲ್ಲ

ಕರ್ನಾಟಕದ ಪುತ್ತೂರು ಮಹಾಲಿಂಗೇಶ್ವರ ದೇವಾಲಯದ ಅಭಿವೃದ್ಧಿಗೆ ಸಂಬಂಧಿಸಿದ ಯಾವುದೇ ಯೋಜನೆಯು ಪ್ರಸ್ತುತ ಪ್ರಶಾದ್ ಯೋಜನೆಯಡಿ ಅನುಮೋದನೆಗಾಗಿ ಪರಿಗಣನೆಯಲ್ಲಿಲ್ಲ ಎಂದು ಕೇಂದ್ರ …