Tuesday, December 16 2025 | 10:08:38 PM
Breaking News

ಹಾರ್ನ್ ಬಿಲ್ ಉತ್ಸವವನ್ನು ಭಾರತದ ಸಾಂಸ್ಕೃತಿಕ ಪ್ರತಿಭೆಗಳ ಮತ್ತು ಈಶಾನ್ಯದ ಹೆಚ್ಚುತ್ತಿರುವ ಆತ್ಮವಿಶ್ವಾಸದ ಆಚರಣೆಯಾಗಿದೆ ಎಂದು ಶ್ಲಾಘಿಸುವ ಲೇಖನವನ್ನು ಹಂಚಿಕೊಂಡ ಪ್ರಧಾನಮಂತ್ರಿ

Connect us on:

ನಾಗಾಲ್ಯಾಂಡ್ ನ ಹಾರ್ನ್ ಬಿಲ್ ಉತ್ಸವದ ಉತ್ಸಾಹಭರಿತ ಮನೋಭಾವವನ್ನು ಶ್ಲಾಘಿಸಿದ್ದಾರೆ, ಇದು ಭಾರತದ ಸಾಂಸ್ಕೃತಿಕ ಶ್ರೀಮಂತಿಕೆ ಮತ್ತು ಅದರ ಬುಡಕಟ್ಟು ಪರಂಪರೆಯ ಶಾಶ್ವತ ಚೈತನ್ಯದ ಪ್ರಬಲ ಪ್ರತಿಬಿಂಬವಾಗಿದೆ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಇಂದು ಬಣ್ಣಿಸಿದ್ದಾರೆ.

ಇಂದು ಈಶಾನ್ಯವು ಹೊಸ, ಆತ್ಮವಿಶ್ವಾಸದ ಭಾರತದ ಮುಖವನ್ನು ಪ್ರತಿನಿಧಿಸುತ್ತದೆ ಎಂದು  ನಾಗಾಲ್ಯಾಂಡ್ ನ ವಿಶಿಷ್ಟ ಸಾಂಸ್ಕೃತಿಕ ಗುರುತನ್ನು ಶ್ಲಾಘಿಸಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು, ರಾಜ್ಯವು ಕೇವಲ ಉತ್ಸವವನ್ನು ಆಯೋಜಿಸುವುದಿಲ್ಲ; ಅದು ಆಚರಣೆಯನ್ನು ಸ್ವತಃ ಸಾಕಾರಗೊಳಿಸುತ್ತದೆ, ಹಬ್ಬಗಳ ನಾಡು ಎಂಬ ಹೆಮ್ಮೆಯ ಶೀರ್ಷಿಕೆಯನ್ನು ನಿಜವಾಗಿಯೂ ಸಮರ್ಥಿಸುತ್ತದೆ ಎಂದು ತಿಳಿಸಿದ್ದಾರೆ.

ಕೇಂದ್ರ ಸಚಿವರಾದ ಶ್ರೀ ಜ್ಯೋತಿರಾದಿತ್ಯ ಎಂ. ಸಿಂಧಿಯಾ ಅವರ ಎಕ್ಸ್ ತಾಣದ ಸಂದೇಶಕ್ಕೆ ಸ್ಪಂದಿಸಿ  ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಈ ರೀತಿ ಪ್ರತಿಕ್ರಿಯಿಸಿದ್ದಾರೆ;

“ಈ ಆಕರ್ಷಕ ಲೇಖನದಲ್ಲಿ, ಕೇಂದ್ರ ಸಚಿವರಾದ ಶ್ರೀ @JM_Sindia ಅವರು ನಾಗಾಲ್ಯಾಂಡ್ ನ ಹಾರ್ನ್ ಬಿಲ್ ಉತ್ಸವವನ್ನು ಮಾನವ ಚೈತನ್ಯದ ಕೆಲಿಡೋಸ್ಕೋಪ್ ಮತ್ತು ಪ್ರಾಚೀನ ಮತ್ತು ಸಮಕಾಲೀನತೆಯ ಅದ್ಭುತ ಸಂಗಮ ಎಂದು ಬಣ್ಣಿಸಿದ್ದಾರೆ. ಈಶಾನ್ಯ ಭಾರತವು ಬೆಳಗಿದಾಗ ಮಾತ್ರ ನಮ್ಮ ದೇಶವು ಉದಯಿಸುತ್ತದೆ ಎಂದು ಅವರು ಪುನರುಚ್ಚರಿಸಿದ್ದಾರೆ.

ಹೊಸ, ಆತ್ಮವಿಶ್ವಾಸದ ಭಾರತದ ಮುಖವಾಗಿ ಈಶಾನ್ಯವನ್ನು ಎತ್ತಿ ತೋರಿಸುತ್ತಾ, ನಾಗಾಲ್ಯಾಂಡ್ ಹಬ್ಬಗಳನ್ನು ಕೇವಲ ಆಚರಿಸುವುದಿಲ್ಲ – ಅದು ಆಚರಣೆಯನ್ನು ಸಾಂಸ್ಕೃತಿಕವಾಗಿ ಸಾಕಾರಗೊಳಿಸುತ್ತದೆ, ಅದನ್ನು ಹಬ್ಬಗಳ ನಾಡು ಎಂದು ಏಕೆ ಕರೆಯಲಾಗುತ್ತದೆ  ಎಂಬುದನ್ನು ನಿಜವಾಗಿಯೂ ಸಮರ್ಥಿಸುತ್ತದೆ ಎಂದು ಸಚಿವರು ತಮ್ಮ ಲೇಖನದಲ್ಲಿ ವಿವರಿಸಿದ್ದಾರೆ.”

About Matribhumi Samachar

Check Also

ಸ್ವದೇಶ್ ದರ್ಶನ್ 2.0 ಮತ್ತು ಪ್ರಸಾದ್‌ ಯೋಜನೆಗಳ ಅಡಿಯಲ್ಲಿ ಕರ್ನಾಟಕದ ಹಂಪಿ, ಮೈಸೂರು, ಬೀದರ್‌ ಮತ್ತಿತರ ತಾಣಗಳಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಮಂಜೂರಾತಿ: ಕೇಂದ್ರ ಸಚಿವರಾದ ಶ್ರೀ ಗಜೇಂದ್ರಸಿಂಗ್‌ ಶೆಖಾವತ್

ಸ್ವದೇಶ್ ದರ್ಶನ್ 2.0 ಮತ್ತು ಪ್ರಸಾದ್‌ ಯೋಜನೆಗಳ ಅಡಿಯಲ್ಲಿ ಕರ್ನಾಟಕದ ವಿಶ್ವವಿಖ್ಯಾತ ಹಂಪಿ, ಪಾರಂಪರಿಕ ನಗರಿ ಮೈಸೂರು, ಬೀದರ್‌ ಮತ್ತಿತರ …