Wednesday, December 17 2025 | 10:30:50 AM
Breaking News

ಉದ್ಯೋಗದಾತರು ಮತ್ತು ಉದ್ಯೋಗಿಗಳ ನೋಂದಣಿ ಪ್ರಚಾರ ಯೋಜನೆ (SPREE) ಕುರಿತು ಜಾಗೃತಿ ಮೂಡಿಸಲು ಬೆಂಗಳೂರಿನಲ್ಲಿ ನೌಕರರ ರಾಜ್ಯ ವಿಮಾ ನಿಗಮ (ESIC) ಪ್ರಾದೇಶಿಕ ಕಚೇರಿಯಿಂದ ಪತ್ರಿಕಾಗೋಷ್ಠಿ ನಡೆಯಿತು

Connect us on:

ಕಾರ್ಮಿಕರ ರಾಜ್ಯ ವಿಮಾ ನಿಗಮ, ಪ್ರಾದೇಶಿಕ ಕಛೇರಿ, ಕರ್ನಾಟಕ ಬೆಂಗಳೂರು ವತಿಯಿಂದ ಇಂದು ಶ್ರೀ ಮನೋಜ್ ಕುಮಾರ್, ಪ್ರಾದೇಶಿಕ ನಿರ್ದೇಶಕರು, ಇವರ ಅಧ್ಯಕ್ಷತೆಯಲ್ಲಿ ಕರ್ನಾಟಕದಲ್ಲಿ ಇ.ಎಸ್.ಐ ಯೋಜನೆಯ ಬಗ್ಗೆ ಪತ್ರಿಕಾಗೋಷ್ಠಿ ನಡೆಯಿತು. ಶ್ರೀ ಅರಸದ ಕಿಶೋರ್, ಜಂಟಿ ನಿರ್ದೇಶಕರು (ಉಸ್ತುವಾರಿ), ಉಪ ಪ್ರಾದೇಶಿಕ ಕಛೇರಿ, ಪೀಣ್ಯ ಹಾಗೂ ಶ್ರೀಮತಿ ಕಣಿತ ಸೆಲ್ವಿ, ಜಂಟಿ ನಿರ್ದೇಶಕರು (ಉಸ್ತುವಾರಿ), ಉಪ ಪ್ರಾದೇಶಿಕ ಕಛೇರಿ, ಬೊಮ್ಮಸಂದ್ರ ಅವರು ಉಪಸ್ಥಿತರಿದ್ದರು.

ಪತ್ರಿಕಾಗೋಷ್ಠಿಯಲ್ಲಿ ಶ್ರೀ ಮನೋಜ್ ಕುಮಾರ್ ಅವರು ವಿಶ್ವದ ಅತಿ ದೊಡ್ಡ ಸಾಮಾಜಿಕ ಸುರಕ್ಷಾ ಸಂಸ್ಥೆ ಕಾರ್ಮಿಕರ ರಾಜ್ಯ ವಿಮಾ ನಿಗಮವು ‘ಕಾರ್ಮಿಕರ ರಾಜ್ಯ ವಿಮಾ ಕಾಯ್ದೆ 1948’ರ ಅಡಿಯಲ್ಲಿ ರಚಿಸಿದ ಭಾರತದ ಸಂಸತ್ತಿನಲ್ಲಿ ಅನುಮೋದನೆಗೊಂಡ ಸಾಮಾಜಿಕ ಭದ್ರತಾ ಕಾಯ್ದೆಯಾಗಿದ್ದು, ಕಾಯ್ದೆಯ ಅಡಿಯಲ್ಲಿ ನೋಂದಾಯಿಸಲಾದ ಕಾರ್ಮಿಕರಿಗೆ ಅನಾರೋಗ್ಯ, ಮಾತೃತ್ವ, ಉದ್ಯೋಗ ಸಂಬಂಧಿ ಅಪಘಾತದಿಂದ ಆದ ಗಾಯ, ಅಂಗವಿಕಲತೆ ಮತ್ತು ಮರಣದಂತಹ ಆಕಸ್ಮಿಕ ಸಂದರ್ಭಗಳಲ್ಲಿ ವೈದ್ಯಕೀಯ ಆರೈಕೆ ಮತ್ತು ನಗದು ಸೌಲಭ್ಯಗಳನ್ನು ಒದಗಿಸುತ್ತದೆ ಎಂದು ತಿಳಿಸಿದರು.

ಕರ್ನಾಟಕದಲ್ಲಿ ಇ.ಎಸ್.ಐ ಯೋಜನೆಯ ಕುರಿತು 

ಇ.ಎಸ್.ಐ ಯೋಜನೆಯನ್ನು  ಕರ್ನಾಟಕ ರಾಜ್ಯದ ಎಲ್ಲಾ 31 ಜಿಲ್ಲೆಗಳಲ್ಲಿ ಜಾರಿಗೆ ತರಲಾಗಿದ್ದು, ಒಟ್ಟು 35.00 ಲಕ್ಷ ವಿಮಾದಾರರು ಮತ್ತು 140 ಲಕ್ಷ ಕುಟುಂಬ ಸದಸ್ಯರುಗಳು ಈ ಯೋಜನೆಯ ಫಲಾನುಭವಿಗಳಾಗಿದ್ದಾರೆ. ಒಟ್ಟು 1.87 ಲಕ್ಷ ಉದ್ಯೋಗದಾತರು ಈ ಯೋಜನೆಯಡಿಯಲ್ಲಿ ನೋಂದಾಯಿಸಿಕೊAಡಿದ್ದಾರೆ ಎಂದು ಮಾಹಿತಿ ನೀಡಿದರು.

ಶ್ರೀ ಅರಸರ ಕಿಶೋರ್, ಜಂಟಿ ನಿರ್ದೇಶಕರು ಮಾತನಾಡಿ, ಕಾರ್ಮಿಕರ ರಾಜ್ಯ ವಿಮಾ ನಿಗಮವು ಪ್ರಸ್ತುತ ಬೆಂಗಳೂರಿನ ಬಿನ್ನಿಪೇಟೆಯಲ್ಲಿ ಪ್ರಾದೇಶಿಕ ಕಛೇರಿಯನ್ನು ಹೊಂದಿದ್ದು, 06 ಉಪ ಪ್ರಾದೇಶಿಕ ಕಛೇರಿಗಳನ್ನು (ಬೆಂಗಳೂರು ದಕ್ಷಿಣ (ಬೊಮ್ಮಸಂದ್ರ), ಬೆಂಗಳೂರು ಉತ್ತರ (ಪೀಣ್ಯ), ಕಲ್ಬುರ್ಗಿ, ಹುಬ್ಬಳ್ಳಿ, ಮಂಗಳೂರು ಮತ್ತು ಮೈಸೂರು) ಹೊಂದಿದೆ ಎಂದು ಮಾಹಿತಿ ನೀಡಿದರು.

ಶ್ರೀ ಮನೋಜ್ ಕುಮಾರ್, ಪ್ರಾದೇಶಿಕ ನಿರ್ದೇಶಕರು ಈ ಯೋಜನೆಯನ್ನು ಮತ್ತಷ್ಟು ವಿಸ್ತರಿಸುವ ಮತ್ತು ಸಾಮಾಜಿಕ ರಕ್ಷಣೆಯನ್ನು ಗರಿಷ್ಟ ಕಾರ್ಖಾನೆ ಉದ್ಯೋಗಿಗಳನ್ನು ಕಾಯ್ದೆಯಡಿ ತರುವ ಉದ್ದೇಶದಿಂದ ಕಾರ್ಮಿಕರ ರಾಜ್ಯ ವಿಮಾ ನಿಗಮವು (ಇಎಸ್‌ಐಸಿ) SPREE 2025 (Scheme for promotion of Registration of employers and employees – ಉದ್ಯೋಗದಾತರು ಮತ್ತು ಉದ್ಯೋಗಿಗಳ ನೋಂದಣಿಯನ್ನು ಉತ್ತೇಜಿಸುವ ಯೋಜನೆ – 2025) ಎಂಬ ನವೀಕೃತ ಯೋಜನೆಯನ್ನು ಡಾ. ಮನ್ಸುಖ್ ಮಾಂಡವೀಯ, ಮಾನ್ಯ ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಹಾಗೂ ಯುವವ್ಯವಹಾರ ಮತ್ತು ಕ್ರೀಡಾ ಸಚಿವರು, ಇವರ ಅಧ್ಯಕ್ಷತೆಯಲ್ಲಿ ಹಿಮಾಚಲ ಪ್ರದೇಶದ ಶಿಮ್ಲಾದಲ್ಲಿ ನಡೆದ ಕಾರ್ಮಿಕರ ರಾಜ್ಯ ವಿಮಾ ನಿಗಮದ 196ನೇ ಸಭೆಯಲ್ಲಿ ಅನುಮೋದಿಸಿದೆ.

ಉದ್ಯೋಗದಾತರು ಮತ್ತು ಉದ್ಯೋಗಿಗಳ ನೋಂದಣಿಯನ್ನು ಉತ್ತೇಜಿಸುವ ಯೋಜನೆ (SPREE) 2025 ಕಾರ್ಮಿಕರ ರಾಜ್ಯ ವಿಮಾ ನಿಗಮವು ಸಾಮಾಜಿಕ ಭದ್ರತಾ ವ್ಯಾಪ್ತಿಯನ್ನು ವಿಸ್ತರಿಸಲು ಅನುಮೋದಿಸಿದ ಒಂದು ವಿಶೇಷ ಉಪಕ್ರಮವಾಗಿದ್ದು, ಕಾಯ್ದೆಯ ನಿಬಂಧನೆಗಳಿಗೆ ಅನುಸಾರವಾಗಿ 10 ಮತ್ತು ಅದಕ್ಕಿಂತ ಹೆಚ್ಚು ಉದ್ಯೋಗಿಗಳನ್ನು ಹೊಂದಿರುವ ಎಲ್ಲಾ ಘಟಕಗಳು/ಸಂಸ್ಥೆಗಳು ತಮ್ಮ ಸ್ಥಾಪನೆಯ ೧೫ ದಿನಗಳೊಳಗಾಗಿ ಕಾಯ್ದೆಯಡಿ ನೋಂದಾಯಿಸಿಕೊಳ್ಳಬೇಕು, ಆದಾಗ್ಯೂ ಯಾವುದೇ ಕಾರಣದಿಂದ ಉದ್ಯೋಗದಾತರು ತಮ್ಮ ಸಂಸ್ಥೆ/ಘಟಕವನ್ನು ಇನ್ನೂ ನೋಂದಾಯಿಸದಿದ್ದಲ್ಲಿ, ಈ ಯೋಜನೆ ದಿನಾಂಕ 01ನೇ ಜುಲೈ ರಿಂದ 31ನೇ ಡಿಸೆಂಬರ್ 2025 ರವರೆಗೆ 6 ತಿಂಗಳ ಅವಧಿಗೆ ಜಾರಿಯಲ್ಲಿದ್ದು, ಗುತ್ತಿಗೆ ಹಾಗೂ ತಾತ್ಕಾಲಿಕ ಕಾರ್ಮಿಕರು ಸೇರಿದಂತೆ ಇಎಸ್‌ಐ ಅಡಿಯಲ್ಲಿ ಇನ್ನೂ ನೋಂದಾವಣೆಯಾಗದ  ಉದ್ಯೋಗದಾತರು ಮತ್ತು ಉದ್ಯೋಗಿಗಳು ನೋಂದಾವಣಿ ಪೂರ್ವದ ಯಾವುದೇ ಪರಿಶೀಲನೆ ಅಥವಾ ಹಿಂದಿನ ಅವಧಿಯ ಯಾವುದೇ ಬಾಕಿಪಾವತಿಯ ಬೇಡಿಕೆ ಇಲ್ಲದೇ ನೋಂದಾಯಿಸಿಕೊಳ್ಳಲು ಒಂದು ಬಾರಿಯ ಅವಕಾಶವನ್ನು ಒದಗಿಸುತ್ತದೆ ಎಂದು ತಿಳಿಸಿದರು.

SPREE 2025ರ ಪ್ರಮುಖ ಪ್ರಯೋಜನಗಳು ಈ ಕೆಳಕಂಡಂತಿವೆ

ಉದ್ಯೋಗದಾತರು ತಮ್ಮ ಘಟಕಗಳು ಮತ್ತು ಉದ್ಯೋಗಿಗಳನ್ನು ಇಎಸ್‌ಐಸಿ ಪೋರ್ಟಲ್, ಶ್ರಮ್ ಸುವಿಧಾ ಮತ್ತು ಎಂಸಿಎ (ESIC Portal, Shram suvidhaa, MCA) ಪೋರ್ಟಲ್ ಮೂಲಕ ಡಿಜಿಟಲ್ ರೂಪದಲ್ಲಿ ನೋಂದಾಯಿಸಿಕೊಳ್ಳಬಹುದು. ಉದ್ಯೋಗದಾತರು ತಾವು ಘೋಷಿಸಿದ ದಿನಾಂಕದಿAದ ನೋಂದಣಿಯನ್ನು ಪರಿಗಣಿಸಲಾಗುತ್ತದೆ. ನೋಂದಣಿಯ ಪೂರ್ವ ಅವಧಿಗೆ ಯಾವುದೇ ವಂತಿಗೆ ಮತ್ತು ಸೌಲಭ್ಯವು ಅನ್ವಯವಾಗುವುದಿಲ್ಲ. ನೋಂದಣಿಯ ಪೂರ್ವ ಅವಧಿಯ ಯಾವುದೇ ದಾಖಲೆಗಳ ಪರಿಶೀಲನೆ ಅಥವಾ ಬಾಕಿ ಪಾವತಿ ಬೇಡಿಕೆ ಇರುವುದಿಲ್ಲ.

ಈ ಯೋಜನೆಯು ಸ್ವಯಂಪ್ರೇರಿತ ಅನುಸರಣೆಯನ್ನು ಪ್ರೋತ್ಸಾಹಿಸಿ, ಹಿಂದಿನ ಅವಧಿಗೆ ದಂಡ ಪಾವತಿಸಬೇಕಾದ ಭಯವನ್ನು ಹೋಗಲಾಡಿಸಿ, ನೋಂದಾವಣಿಯ ಪ್ರಕ್ರಿಯೆಯನ್ನು ಸರಳೀಕರಿಸಲಾಗಿದೆ, SPREE 2025 ಅನ್ನು ಪರಿಚಯಿಸುವ ಮೊದಲು ನಿಗಧಿತ ಅವಧಿಯಲ್ಲಿ ನೋಂದಾವಣೆ ಮಾಡದಿದ್ದಲ್ಲಿ ಕಾನೂನು ಕ್ರಮ ಹಾಗೂ ಹಿಂದಿನ ಅವಧಿಯ ಬಾಕಿ ಪಾವತಿ ಬೇಡಿಕೆಗೆ ಕಾರಣವಾಗುತ್ತಿತ್ತು, SPREE 2025 ಈ ಅಡೆತಡೆಗಳನ್ನು ನಿವಾರಿಸಿ ನೋಂದಾವಣೆಯಿAದ ಬಿಟ್ಟುಹೋದ ಘಟಕಗಳು ಮತ್ತು ಕಾರ್ಮಿಕರನ್ನು ಇಎಸ್‌ಐ ವ್ಯಾಪ್ತಿಯೊಳಗೆ ಸೇರಿಸಿ ಸಾಮಾಜಿಕ ರಕ್ಷಣೆಯನ್ನು ಖಚಿತಪಡಿಸುತ್ತದೆ ಎಂದು ತಿಳಿಸಿದರು.

ಶ್ರೀಮತಿ ಕಣಿತ ಸೆಲ್ವಿ, ಜಂಟಿ ನಿರ್ದೇಶಕರು ರವರು ಮಾತನಾಡಿ SPREE 2025ರ ಪ್ರಾರಂಭವು ಸಾಮಾಜಿಕ ರಕ್ಷಣೆಯನ್ನು ಒದಗಿಸುವ ಮತ್ತು ದೊರಕಿಸುವ ನಿಟ್ಟಿನಲ್ಲಿ ಕಾರ್ಮಿಕರ ರಾಜ್ಯ ವಿಮಾ ನಿಗಮದ ಒಂದು ಪ್ರಗತಿಪರ ಹೆಜ್ಜೆಯಾಗಿದ್ದು, ಸರಳ ಮತ್ತು ಹಿಂದಿನ ಅವಧಿಯ ಬಾಕಿಪಾವತಿಯ ಬೇಡಿಕೆಯ ಭಾಧ್ಯತೆಯಿಲ್ಲದೆ ನೋಂದಾವಣೆಗೊಂಡು ಸುಲಭವಾಗಿ ಸಾಮಾಜಿಕ ಭದ್ರತೆಗೆ ಒಳಪಡುವ ಯೋಜನೆಯಾಗಿದೆ. ಈ ಯೋಜನೆಯು ಉದ್ಯೋಗದಾತರು ಕೇವಲ ತಮ್ಮ ಕಾರ್ಯಪಡೆಯ ಕ್ರಮಬಧ್ಧಗೊಳಿಸುವಿಕೆಯನ್ನು ಪ್ರೋತ್ಸಾಹಿಸುವುದಲ್ಲದೆ, ಇನ್ನೂ ಹೆಚ್ಚಿನ ಕಾರ್ಮಿಕರನ್ನು ವಿಶೇಷವಾಗಿ ತಾತ್ಕಾಲಿಕ ಮತ್ತು ಗುತ್ತಿಗೆ ವಲಯದ ಕಾರ್ಮಿಕರು ಇಎಸ್‌ಐ ಕಾಯ್ದೆಯಡಿಯಲ್ಲಿ ದೊರೆಯುವ ಆರೋಗ್ಯ ರಕ್ಷಣೆ ಹಾಗೂ ಸಾಮಾಜಿಕ ಸೌಲಭ್ಯಗಳನ್ನು ಪಡೆಯುವುದನ್ನು ಉತ್ತೇಜಿಸುತ್ತದೆ, ಇದರೊಂದಿಗೆ ಇಎಸ್‌ಐಸಿಯು ಆರೋಗ್ಯ ರಕ್ಷಣೆ ಮತ್ತು ಸಾಮಾಜಿಕ ಭದ್ರತೆಯನ್ನು ಅಗತ್ಯವಿರುವವರಿಗೆ ತಲುಪಿಸುವ ತನ್ನ ಬದ್ಧತೆಯನ್ನು ಉಳಿಸಿಕೊಂಡು ಭಾರತದ ಕಾರ್ಮಿಕ ಕಲ್ಯಾಣ ಕೇಂದ್ರಿತ ದೃಷ್ಟಿಕೋನಕ್ಕೆ ಅನುಗುಣವಾಗಿದೆ. ಎಂದು ಮಾಹಿತಿ ನೀಡಿದರು.

ಶ್ರೀ ಮನೋಜ್ ಕುಮಾರ್, ರವರು ಯೋಜನೆಯ ಬಗ್ಗೆ ಮಾಹಿತಿ ಮುಂದುವರೆಸುತ್ತಾ, ಈ ಮೇಲಿನ ಯೋಜನೆಯ ಜೊತೆಗೆ, ಕಾರ್ಮಿಕರ ರಾಜ್ಯ ವಿಮಾ ನಿಗಮದ 196ನೇ ಸಭೆಯಲ್ಲಿ ಇ.ಎಸ್.ಐ ಕಾಯ್ದೆಯ ಅನುಸರಣೆಯನ್ನು ಉತ್ತೇಜಿಸಲು ‘ಕ್ಷಮಾದಾನ ಯೋಜನೆ 2025’ ಎಂಬ ಯೋಜನೆಯನ್ನು ಅನುಮೋದಿಸಿದ್ದು/ ಪ್ರಾರಂಭಿಸಿದ್ದು,  ಈ ಯೋಜನೆಯು 01ನೇ ಅಕ್ಟೋಬರ್ 2025 ರಿಂದ 30ನೇ ಸೆಪ್ಟೆಂಬರ್ 2026 ರವರೆಗೆ ಜಾರಿಯಲ್ಲಿದ್ದು, ಉದ್ಯೋಗದಾತರು ಮತ್ತು ನಿಗಮದ ನಡುವಿನ ವ್ಯಾಜ್ಯಗಳನ್ನು ಪರಸ್ಪರ ಇತ್ಯರ್ಥಪಡಿಸಿ ಪರಿಹಾರವನ್ನು ಕಂಡುಕೊಂಡು ವ್ಯಾಜ್ಯಗಳನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿದ್ದು, ಸರಳೀಕೃತ ಸರಾಗ ವ್ಯವಹಾರವನ್ನು ಪ್ರೋತ್ಸಾಹಿಸುತ್ತದೆ ಎಂದು ತಿಳಿಸಿದರು.

ಕಾರ್ಮಿಕರ ರಾಜ್ಯ ವಿಮಾ ನಿಗಮದ ಸಹೋದರಿ ಸಂಸ್ಥೆಯಾದ ಕಾರ್ಮಿಕರ ಭವಿಷ್ಯ ನಿಧಿ ಸಂಘಟನೆ ಅಡಿಯಲ್ಲಿ (ಇ ಪಿ ಎಫ್ ಒ)- ಉದ್ಯೋಗ ಪ್ರೋತ್ಸಾಹಕ ಯೋಜನೆ (ಇ.ಎಲ್.ಐ) ಎಂಬ ನವೀನ ಯೋಜನೆಯನ್ನು ಭಾರತ ಸರ್ಕಾರವು ಇತ್ತೀಚೆಗೆ ಪರಿಚಯಿಸಿದ್ದು, ಈ ಯೋಜನೆಯಡಿಯಲ್ಲಿ, ಸಾಮಾಜಿಕ ಭದ್ರತೆಯ ಎಲ್ಲ ವಲಯಗಳಲ್ಲಿ, ವಿಶೇಷವಾಗಿ ಉತ್ಪಾದಕ ವಲಯದಲ್ಲಿ ಉದ್ಯೋಗ ಸೃಷ್ಟಿಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ, ಮೊದಲಬಾರಿ ಮಾಸಿಕ ರೂ.15000/- ವರೆಗೆ ವೇತನ ಪಡೆದ ಉದ್ಯೋಗಿಗಳ ಉದ್ಯೋಗದಾತರು 2 ವರ್ಷಗಳವರೆಗೆ ಪ್ರೋತ್ಸಾಹದಾಯಕ ಇನ್ಸೆಂಟಿವ್ ಪಡೆಯಬಹುದು ಮತ್ತು ಉತ್ಪಾದನಾ ವಲಯದಲ್ಲಿ ಹೆಚ್ಚುವರಿ ಉದ್ಯೋಗವನ್ನು ಸೃಷ್ಟಿಸಿದಲ್ಲಿ ಮತ್ತೆ ಎರಡು ವರ್ಷಕ್ಕೆ ವಿಸ್ತರಿಸಲಾಗುವುದು. ಈ ಯೋಜನೆಯಡಿ ದೊರೆಯುವ ಸೌಲಭ್ಯವು ದಿನಾಂಕ 01ನೇ ಆಗಸ್ಟ್ 2025 ರಿಂದ 31ನೇ ಜುಲೈ 2027 ರ ಅವಧಿಯಲ್ಲಿ ಸೃಷಿಯಾದ ಉದ್ಯೋಗಗಳಿಗೆ ಅನ್ವಯಿಸುತ್ತದೆ ಎಂದು ತಿಳಿಸಿದರು.

ಈ ಪತ್ರಿಕಾಗೋಷ್ಠಿಯಲ್ಲಿ, ಕಾರ್ಮಿಕರ ರಾಜ್ಯ ವಿಮಾ ನಿಗಮದ ಜಂಟಿ ನಿರ್ದೇಶಕರುಗಳಾದ, ಶ್ರೀ ಸುನಿಲ್ ಕುಮಾರ್ ಮೆಹತೋ, ಶ್ರೀ ಮನೀಷ್ ಗುಪ್ತ, ಶ್ರೀ ದರ್ಬರಾ ಸಿಂಗ್, ಉಪನಿರ್ದೇಶಕರು (ಸಾರ್ವಜನಿಕ ಸಂಪರ್ಕ), ಶ್ರೀ ವಿನೋದ್ ಖಾರಕ್ವಾಲ್, ಕಾರ್ಯಪಾಲಕ ಅಭಿಯಂತರರು, ಉಪ ನಿರ್ದೇಶಕರುಗಳಾದ ಶ್ರೀ ಅಭಿಷೇಕ್ ಕುಮಾರ್ ಸಿಂಗ್, ಶ್ರೀ ಮಹೇಶ್ ಕುಮಾರ್ ಪಾಂಡೆ, ಶ್ರೀ ಸಂಗ್ ಪ್ರಿಯಾ ಆನಂದ್ ಹಾಗೂ ಇತರರು ಹಾಜರಿದ್ದರು.

About Matribhumi Samachar

Check Also

ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಉದ್ಯಮಗಳ(ಎಂ.ಎಸ್.ಎಂ.ಇ. ಗಳ) ಬೆಳವಣಿಗೆಗೆ ಕೇಂದ್ರ ಸರ್ಕಾರ ಬದ್ಧವಾಗಿದೆ

ಸರ್ಕಾರವು 01.07.2020 ರಂದು ಆನ್ಲೈನ್ ಮೂಲಕ ನೋಂದಾಯಿಸಿಕೊಳ್ಳಲು ಉದ್ಯಮ ನೋಂದಣಿ ಪೋರ್ಟಲ್ ಅನ್ನು ಪ್ರಾರಂಭಿಸಿತು. ಇಲ್ಲಿಯವರೆಗೆ 7.28 ಕೋಟಿಗೂ ಹೆಚ್ಚು …