Thursday, January 01 2026 | 09:56:31 AM
Breaking News

ಬೆಳಗಾವಿಯ ಡಿಎಲ್‍ಸಿ ಶಿಬಿರಕ್ಕೆ ಡಿಒಪಿಪಿಡಬ್ಲೂ ಇಲಾಖೆಯ ಅಧೀನ ಕಾರ್ಯದರ್ಶಿ ಶ್ರೀ ದೀಪಕ್ ಗುಪ್ತಾ ಭೇಟಿ

Connect us on:

ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆಗಳು ಮತ್ತು ಪಿಂಚಣಿಗಳ ಸಚಿವಾಲಯದ ಅಡಿಯಲ್ಲಿರುವ ಪಿಂಚಣಿ ಮತ್ತು ಪಿಂಚಣಿದಾರರ ಕಲ್ಯಾಣ ಇಲಾಖೆಯು ಪಿಂಚಣಿದಾರರ ಡಿಜಿಟಲ್ ಸಬಲೀಕರಣದ ಸರ್ಕಾರದ ದೃಷ್ಟಿಕೋನದ ಅಡಿಯಲ್ಲಿ ನವೆಂಬರ್ 1 ರಿಂದ 30, 2025 ರವರೆಗೆ ದೇಶಾದ್ಯಂತ ಡಿಜಿಟಲ್ ಜೀವಿತ ಪ್ರಮಾಣಪತ್ರ ಅಭಿಯಾನ 4.0 ಆಯೋಜಿಸಿದೆ. ಈ ಅಭಿಯಾನವು ದೇಶದಾದ್ಯಂತ 2,000ಕ್ಕೂ ಹೆಚ್ಚು ನಗರ ಮತ್ತು ಪಟ್ಟಣಗಳನ್ನು ಒಳಗೊಂಡು, ಬಹು ಡಿಜಿಟಲ್ ವಿಧಾನಗಳ ಮೂಲಕ ಪಿಂಚಣಿದಾರರಿಗೆ ತಮ್ಮ ಜೀವಿತ ಪ್ರಮಾಣಪತ್ರಗಳನ್ನು ಸಲ್ಲಿಸಲು ಅನುಕೂಲ ಕಲ್ಪಿಸುವ ಪರಿಪೂರ್ಣತೆಯ ವಿಧಾನವನ್ನು ಅಳವಡಿಸಿಕೊಂಡಿದೆ.

ಇಲಾಖೆಯು 2021ರಲ್ಲಿ ಪರಿಚಯಿಸಲಾದ ಆಧಾರ್-ಆಧಾರಿತ ಮುಖ ದೃಢೀಕರಣ ತಂತ್ರಜ್ಞಾನದ ಬಳಕೆಯನ್ನು ಉತ್ತೇಜಿಸುವುದನ್ನು ಮುಂದುವರೆಸಿದೆ. ಇದು ಪಿಂಚಣಿದಾರರಿಗೆ ತಮ್ಮ ಸ್ಮಾರ್ಟ್‌ಫೋನ್ ಬಳಸಿ ಮನೆಯಲ್ಲಿಯೇ ಸುಲಭವಾಗಿ ಜೀವಿತ ಪ್ರಮಾಣಪತ್ರಗಳನ್ನು ಸಲ್ಲಿಸಲು ಅನುವು ಮಾಡಿಕೊಡುತ್ತದೆ. ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್, ಅತಿ ಹಿರಿಯ ಮತ್ತು ವಿಶೇಷಚೇತನ ಪಿಂಚಣಿದಾರರಿಗೆ ಮನೆಬಾಗಿಲಿಗೆ ಡಿಎಲ್‌ಸಿ ಸೇವೆಗಳನ್ನು ಒದಗಿಸುತ್ತಿದ್ದು, ಬ್ಯಾಂಕ್‌ಗಳು, ಪಿಂಚಣಿದಾರರ ಸಂಘಗಳು ಮತ್ತು ಕ್ಷೇತ್ರ ಕಚೇರಿಗಳು ಜಾಗೃತಿ ಶಿಬಿರಗಳನ್ನು ನಡೆಸಿ ಸ್ಥಳದಲ್ಲೇ ಸಹಾಯ ಒದಗಿಸಿವೆ.

ಡಿಎಲ್‌ಸಿ 3.0, 2024ರ ಅವಧಿಯಲ್ಲಿ, ಮುಖ ದೃಢೀಕರಣದ ಮೂಲಕ 50 ಲಕ್ಷ ಸೇರಿದಂತೆ, 1.62 ಕೋಟಿಗೂ ಹೆಚ್ಚು ಡಿಎಲ್‌ಸಿಗಳನ್ನು ರಚಿಸಲಾಗಿತ್ತು. ಪ್ರಸ್ತುತ ನಡೆಯುತ್ತಿರುವ ಡಿಎಲ್‌ಸಿ 4.0, 2025ರಲ್ಲಿ, ಆರಂಭಿಕ ವರದಿಗಳ ಪ್ರಕಾರ ದಾಖಲೆ ಮಟ್ಟದ ಭಾಗವಹಿಸುವಿಕೆ ಕಂಡುಬಂದಿದೆ. ಬ್ಯಾಂಕ್‌ಗಳು, ಐಪಿಪಿಬಿ, ಯುಐಡಿಎಐ, ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ, ಸಿಜಿಡಿಎ, ರೈಲ್ವೆ ಮತ್ತು ಪಿಂಚಣಿದಾರರ ಕಲ್ಯಾಣ ಸಂಘಗಳ ಸಂಯೋಜಿತ ಪ್ರಯತ್ನಗಳ ಮೂಲಕ 2 ಕೋಟಿ ಡಿಎಲ್‌ಸಿಗಳ ಗುರಿಯನ್ನು ಸಾಧಿಸುವ ನಿರೀಕ್ಷೆಯಿದೆ.

ಅಭಿಯಾನದ ಭಾಗವಾಗಿ, ಅಧೀನ ಕಾರ್ಯದರ್ಶಿ ಶ್ರೀ ದೀಪಕ್ ಗುಪ್ತಾ ಅವರು ನವೆಂಬರ್ 21, 2025 ರಂದು ಕರ್ನಾಟಕದ ಬೆಳಗಾವಿಯಲ್ಲಿನ ಡಿಎಲ್‌ಸಿ ಶಿಬಿರಕ್ಕೆ ಭೇಟಿ ನೀಡಿ, ಡಿಜಿಟಲ್ ಸೇವೆಗಳನ್ನು ಪಡೆಯುತ್ತಿರುವ ಪಿಂಚಣಿದಾರರೊಂದಿಗೆ ಸಂವಾದ ನಡೆಸಿದರು. ಡಿಒಪಿಪಿಡಬ್ಲ್ಯು ಅಧಿಕಾರಿಗಳು, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಐಪಿಪಿಬಿ ಮತ್ತು ಅಂಚೆ ಇಲಾಖೆಯ ಪ್ರತಿನಿಧಿಗಳೊಂದಿಗೆ ಸೇರಿ, ಮುಖ ದೃಢೀಕರಣದ ಮೂಲಕ ಪಿಂಚಣಿದಾರರು ತಮ್ಮ ಡಿಎಲ್‌ಸಿಗಳನ್ನು ರಚಿಸಲು ನೆರವಾದರು ಮತ್ತು ಅವರಿಗೆ ಪ್ರಕ್ರಿಯೆ ಕುರಿತು ತಿಳಿಸಿದರು. ಬೆಳಗಾವಿಯ ಖಾನಾಪುರ ರಸ್ತೆಯ ಕೆನರಾ ಬ್ಯಾಂಕ್ ಶಾಖೆ ಹಾಗೂ ಮುಖ್ಯ ಅಂಚೆ ಕಚೇರಿಯಲ್ಲಿ ಶಿಬಿರ ನಡೆದಿದ್ದು, ಉತ್ಸಾಹಭರಿತ ಪ್ರತಿಕ್ರಿಯೆ ಮತ್ತು ವ್ಯಾಪಕ ಸ್ಥಳೀಯ ಭಾಗವಹಿಸುವಿಕೆಯನ್ನು ಪಡೆಯಿತು. ಎನ್‌ಐಸಿ ಡಿಎಲ್‌ಸಿ ಪೋರ್ಟಲ್ ಮೂಲಕ ದೈನಂದಿನ ಪ್ರಗತಿಯನ್ನು ಪರಿಶೀಲಿಸಲಾಗುತ್ತಿದ್ದು, ಬ್ಯಾಂಕ್‌ಗಳು ಮತ್ತು ಇಲಾಖೆಗಳ ಅಂಕಿಅಂಶಗಳ ನೈಜ-ಸಮಯದ ಮೇಲ್ವಿಚಾರಣೆಗೆ ಅನುವು ಮಾಡಿಕೊಟ್ಟಿತು.

About Matribhumi Samachar

Check Also

ಹುಬ್ಬಳ್ಳಿಯಲ್ಲಿ ಹೊಸ ಯುಐಡಿಎಐ ಆಧಾರ್ ಸೇವಾ ಕೇಂದ್ರದ ಉದ್ಘಾಟನೆ

ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರವು 29 ಡಿಸೆಂಬರ್ 2025ರಂದು ಹುಬ್ಬಳ್ಳಿಯ ಕೇಶವಪುರದಲ್ಲಿ ಹೊಸ ಯುಐಡಿಎಐ ಆಧಾರ್ ಸೇವಾ ಕೇಂದ್ರವನ್ನು ಉದ್ಘಾಟಿಸಿದೆ. …