Thursday, January 01 2026 | 06:37:47 PM
Breaking News

2025ರ ಗಣರಾಜ್ಯೋತ್ಸವ ಪರೇಡ್ ನಲ್ಲಿ ಎಂ.ಎನ್.ಆರ್.ಇ. ‘ಹೊಸ ಭಾರತದ ಸೂರ್ಯೋದಯ’ ಸ್ತಬ್ಧಚಿತ್ರವನ್ನು ಪ್ರದರ್ಶಿಸಲಿದೆ

Connect us on:

ನವದೆಹಲಿಯ ಕರ್ತವ್ಯ ಪಥದಲ್ಲಿ ನಡೆಯುವ ಗಣರಾಜ್ಯೋತ್ಸವದ ಮೆರವಣಿಗೆಯಲ್ಲಿ ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ (ಎಂ.ಎನ್.ಆರ್.ಇ.) ಆಕರ್ಷಕ ಸ್ತಬ್ಧಚಿತ್ರವನ್ನು ಅನಾವರಣಗೊಳಿಸಲಿದೆ. ಈ ವೈವಿದ್ಯಮಯ ಪ್ರದರ್ಶನವು ಭಾರತದ ವಿಕಸನಗೊಳ್ಳುತ್ತಿರುವ ಇಂಧನ ಕ್ಷೇತ್ರದ ಒಂದು ನೋಟವನ್ನು ನೀಡುತ್ತದೆ. ರಾಷ್ಟ್ರದ ಆಳವಾದ ಸಾಂಸ್ಕೃತಿಕ ಪರಂಪರೆಯನ್ನು ಆಚರಿಸುವಾಗ ನವೀಕರಿಸಬಹುದಾದ ಇಂಧನದಲ್ಲಿ ಅದರ ಅದ್ಭುತ ಪ್ರಗತಿಯನ್ನು ಎತ್ತಿ ತೋರಿಸುತ್ತದೆ.

ವಿಶ್ವದ ಅತಿದೊಡ್ಡ ವಸತಿ ಮೇಲ್ಛಾವಣಿ ಸೌರ ಉಪಕ್ರಮವು ಮಹತ್ವಾಕಾಂಕ್ಷೆಯ ಪ್ರಧಾನಮಂತ್ರಿ ಸೂರ್ಯಘರ್ ಮುಫ್ತ್ ಬಿಜ್ಲಿ ಯೋಜನೆ, ಇತರ ಪರಿವರ್ತಕ ಎಂ.ಎನ್.ಆರ್.ಇ. ಕಾರ್ಯಕ್ರಮಗಳ ಜೊತೆಗೆ ಸಂಯೋಜಿತವಾಗಿ ಸ್ತಬ್ಧಚಿತ್ರದ ಕೇಂದ್ರ ಗಮನ ಸೆಳೆಯುತ್ತದೆ. ಈ ಪ್ರಯತ್ನಗಳು ಭಾರತದ ಹಸಿರು ಆರ್ಥಿಕತೆಯನ್ನು ಮುನ್ನಡೆಸುವುದಲ್ಲದೆ, 2030ರ ವೇಳೆಗೆ ಲಕ್ಷಾಂತರ ಹಸಿರು ಉದ್ಯೋಗಗಳನ್ನು ಸೃಷ್ಟಿಸಲು ಸಜ್ಜಾಗಿವೆ.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಭಾರತದ ಇಂಧನ ಪರಿವರ್ತನೆಯನ್ನು ಒತ್ತಿಹೇಳುವಾಗ, ಹಸಿರು ಹೈಡ್ರೋಜನ್ನಲ್ಲಿ ಭಾರತದ ಪ್ರಗತಿಯನ್ನು ಸಹ ಸ್ತಬ್ಧಚಿತ್ರ ಎತ್ತಿ ತೋರಿಸುತ್ತದೆ. ಇದು ಪವನ ಶಕ್ತಿಯ ನಾಲ್ಕನೇ ಅತಿದೊಡ್ಡ ಸ್ಥಾಪಕರಾಗಿ ಭಾರತದ ಸ್ಥಾನಮಾನವನ್ನು ಎತ್ತಿ ತೋರಿಸುತ್ತದೆ. ಪ್ರಧಾನ ಮಂತ್ರಿ ಸೂರ್ಯಘರ್, ಪ್ರಧಾನ ಮಂತ್ರಿ ಕುಸುಮ್ ಮತ್ತು ಎಂ.ಎನ್.ಆರ್.ಇ. ಆಹ್ವಾನಿಸಿದ ನವೀಕರಿಸಬಹುದಾದ ಇಂಧನ (ಆರ್.ಇ.) ತಂತ್ರಜ್ಞರನ್ನು ಒಳಗೊಂಡ ಎಂಟುನೂರು ವಿಶೇಷ ಅತಿಥಿಗಳು, ಸುಸ್ಥಿರ ಮತ್ತು ಸ್ವಾವಲಂಬಿ ಭವಿಷ್ಯದತ್ತ ಭಾರತದ ಹಾದಿಯ ಈ ವಿಶಿಷ್ಟ ಸ್ತಬ್ಧಚಿತ್ರದ ಚಿತ್ರಣವನ್ನು ವೀಕ್ಷಿಸುವ ಮೊದಲಿಗರ ಸಾಲಿನಲ್ಲಿ ಸೇರಿದ್ದಾರೆ.

ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವರಾದ ಶ್ರೀ ಪ್ರಲ್ಹಾದ್ ಜೋಶಿ ಅವರ ಮಾರ್ಗದರ್ಶನದಲ್ಲಿ ಎಂ.ಎನ್.ಆರ್.ಇ. ತನ್ನ ಪರಿವರ್ತನಾ ಯೋಜನೆಗಳು ಮತ್ತು ಕಾರ್ಯಕ್ರಮಗಳ ಮೂಲಕ ಭಾರತದಲ್ಲಿ ಲಕ್ಷಾಂತರ ಮನೆಗಳಿಗೆ ಕೈಗೆಟುಕುವ ಬೆಲೆಯಲ್ಲಿ ಮತ್ತು ಶುದ್ಧ ಇಂಧನವನ್ನು ಒದಗಿಸುವುದರ ಜೊತೆಗೆ ನವೀಕರಿಸಬಹುದಾದ ಇಂಧನ (ಆರ್.ಇ.) ವಲಯದಲ್ಲಿ ದೇಶೀಯ ಉತ್ಪಾದನೆಯನ್ನು ಉತ್ತೇಜಿಸುತ್ತಿದೆ.

 

भारत : 1885 से 1950 (इतिहास पर एक दृष्टि) व/या भारत : 1857 से 1957 (इतिहास पर एक दृष्टि) पुस्तक अपने घर/कार्यालय पर मंगाने के लिए आप निम्न लिंक पर क्लिक कर सकते हैं

सारांश कनौजिया की पुस्तकें

 

ऑडियो बुक : भारत 1885 से 1950 (इतिहास पर एक दृष्टि)

 

About Matribhumi Samachar

Check Also

ಪವಿತ್ರ ಪ್ರಕಾಶ್ ಉತ್ಸವದಂದು ಶ್ರೀ ಗುರು ಗೋವಿಂದ ಸಿಂಗ್ ಅವರಿಗೆ ಪ್ರಧಾನಮಂತ್ರಿ ಗೌರವ ನಮನ

ಇಂದು ಪವಿತ್ರ ಪ್ರಕಾಶ್ ಉತ್ಸವದ ಸಂದರ್ಭದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಶ್ರೀ ಗುರು ಗೋವಿಂದ ಸಿಂಗ್ ಅವರಿಗೆ …