ಎಂ ಎಸ್ ಎಂ ಇ ವಲಯದ ರಫ್ತಿನ ಇತ್ತೀಚಿನ ಪ್ರವೃತ್ತಿಗಳಲ್ಲಿ ಕಂಡುಬರುವ ಅಂಶವೇನೆಂದೆರೆ, ಒಟ್ಟಾರೆ ಸರಕು ರಫ್ತಿನಲ್ಲಿ ಎಂ ಎಸ್ ಎಂ ಇ ವಲಯದ ಕೊಡುಗೆ 2023-24 ರಲ್ಲಿ ಶೇ.45.74 ರಿಂದ 2024-25ರಲ್ಲಿ ಅಮೆರಿಕನ್ ಡಾಲರ್ ಮೌಲ್ಯದ ಪ್ರಕಾರ ಶೇ.48.55ಕ್ಕೆ ಏರಿಕೆಯಾಗಿದೆ ಎಂಬುದನ್ನು ಬಹಿರಂಗಪಡಿಸುತ್ತದೆ. ಎಂ ಎಸ್ ಎಂ ಇ ವಲಯ ಸೇರಿದಂತೆ ರಫ್ತುಗಳನ್ನು ಉತ್ತೇಜಿಸಲು, ಒಟ್ಟಾರೆ ರಫ್ತು ಪರಿಸರ ವ್ಯವಸ್ಥೆಯನ್ನು ಬಲಪಡಿಸಲು ಸಮಗ್ರ ಚೌಕಟ್ಟಿನಂತೆ ಸರ್ಕಾರ ರಫ್ತು ಉತ್ತೇಜನ …
Read More »ಭಾರತದಾದ್ಯಂತ ಇಂಧನ ಲಭ್ಯತೆಯವನ್ನು ಸುಧಾರಿಸಲು ರಾಷ್ಟ್ರೀಯ ಅನಿಲ ಗ್ರಿಡ್ ವಿಸ್ತರಣೆಯನ್ನು ತೀವ್ರಗೊಳಿಸಲಾಗಿದೆ
ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ನಿಯಂತ್ರಣ ಮಂಡಳಿ (ಪಿ.ಎಮ್.ಜಿ.ಆರ್.ಬಿ.) ನೈಸರ್ಗಿಕ ಅನಿಲ ಪೈಪ್ಲೈನ್ ಗಳನ್ನು (ಎನ್.ಜಿ.ಪಿ.ಎಲ್.) ಹಾಕಲು, ನಿರ್ಮಿಸಲು, ನಿರ್ವಹಿಸಲು ಮತ್ತು ವಿಸ್ತರಿಸಲು ಘಟಕಗಳಿಗೆ ಅಧಿಕಾರ ನೀಡುವ ಅಧಿಕಾರವನ್ನು ಹೊಂದಿದೆ. ದೇಶಾದ್ಯಂತ ನೈಸರ್ಗಿಕ ಅನಿಲದ ಲಭ್ಯತೆಯನ್ನು ಹೆಚ್ಚಿಸುವ ಗುರಿಯೊಂದಿಗೆ, ಪಿ.ಎಮ್.ಜಿ.ಆರ್.ಬಿ. ಸಾಮಾನ್ಯ ವಾಹಕ, ಸ್ಪರ್ ಲೈನ್, ಟೈ-ಇನ್ ಸಂಪರ್ಕ ಮತ್ತು ದೇಶಾದ್ಯಂತ ವಿವಿಧ ಘಟಕಗಳಿಗೆ ಮೀಸಲಾದ ಪೈಪ್ಲೈನ್ ಅನ್ನು ಒಳಗೊಂಡ ಸುಮಾರು 34,233 ಕಿ.ಮೀ. ಎನ್.ಜಿ.ಪಿ.ಎಲ್. ನೆಟ್ವರ್ಕ್ ಅನ್ನು …
Read More »ಐಐಎಸ್ಎಫ್ 2025ರಲ್ಲಿ, ಪ್ರಧಾನಮಂತ್ರಿ ಅವರ ಕೃತಕ ಬುದ್ಧಿಮತ್ತೆ (AI) ಚಾಲಿತ ‘ವಿಕಸಿತ ಭಾರತ’ದ ದೂರದೃಷ್ಟಿಗೆ ಉದ್ಯಮ ನಾಯಕರಿಂದ ಪ್ರಶಂಸೆ
ಡಿಸೆಂಬರ್ 6ರಂದು ಆರಂಭಗೊಂಡ 2025ರ ‘ಭಾರತೀಯ ಅಂತಾರಾಷ್ಟ್ರೀಯ ವಿಜ್ಞಾನ ಹಬ್ಬ’ವು (IISF), ಈ ವರ್ಷದ ಅತ್ಯಂತ ಪ್ರಭಾವಶಾಲಿ ವಿಜ್ಞಾನ ಕಾರ್ಯಕ್ರಮಗಳಲ್ಲಿ ಒಂದಾಗಿ ಹೊರಹೊಮ್ಮಿದೆ. ಇದು ಯುವ ಮನಸ್ಸುಗಳಿಗೆ ಸ್ಫೂರ್ತಿ ತುಂಬುವ ಜೊತೆಗೆ, ‘ವಿಕಸಿತ ಭಾರತ @2047’ರ ಕನಸನ್ನು ನನಸಾಗಿಸುವ ಭಾರತದ ಪ್ರಯತ್ನಗಳಿಗೆ ಬಲ ತುಂಬುತ್ತಿದೆ. ಕಾರ್ಯಕ್ರಮದ ಮೂರನೇ ದಿನದಂದು, “AI ಮತ್ತು AGI: ಬೌದ್ಧಿಕತೆಯ ಭವಿಷ್ಯ” (AI & AGI: The Future of Intelligence) ಎಂಬ ವಿಷಯದ ಕುರಿತು ಉನ್ನತ ಮಟ್ಟದ ಸಂವಾದ ಗೋಷ್ಠಿಯನ್ನು ಏರ್ಪಡಿಸಲಾಗಿತ್ತು. ಕೃತಕ ಬುದ್ಧಿಮತ್ತೆಯಿಂದ (AI) ಕೃತಕ ಸಾಮಾನ್ಯ ಬುದ್ಧಿಮತ್ತೆಯೆಡೆಗಿನ …
Read More »ಪುತ್ತೂರು ಮಹಾಲಿಂಗೇಶ್ವರ ದೇವಾಲಯದ ಅಭಿವೃದ್ಧಿಗೆ ಸಂಬಂಧಿಸಿದ ಯಾವುದೇ ಯೋಜನೆಯು ಪ್ರಸ್ತುತ ಪ್ರಶಾದ್ ಯೋಜನೆಯಡಿ ಪರಿಗಣನೆಯಲ್ಲಿಲ್ಲ
ಕರ್ನಾಟಕದ ಪುತ್ತೂರು ಮಹಾಲಿಂಗೇಶ್ವರ ದೇವಾಲಯದ ಅಭಿವೃದ್ಧಿಗೆ ಸಂಬಂಧಿಸಿದ ಯಾವುದೇ ಯೋಜನೆಯು ಪ್ರಸ್ತುತ ಪ್ರಶಾದ್ ಯೋಜನೆಯಡಿ ಅನುಮೋದನೆಗಾಗಿ ಪರಿಗಣನೆಯಲ್ಲಿಲ್ಲ ಎಂದು ಕೇಂದ್ರ ಪ್ರವಾಸೋದ್ಯಮ ಸಚಿವರಾದ ಶ್ರೀ ಗಜೇಂದ್ರಸಿಂಗ್ ಶೆಖಾವತ್ ಹೇಳಿದ್ದಾರೆ. ಪ್ರವಾಸೋದ್ಯಮ ಯೋಜನೆಗಳಿಗೆ ಆರ್ಥಿಕ ಸಹಾಯಕ್ಕಾಗಿ ರಾಜ್ಯ ಸರ್ಕಾರಗಳು/ಕೇಂದ್ರಾಡಳಿತ ಪ್ರದೇಶಗಳಿಂದ ಪ್ರಸ್ತಾವನೆಗಳನ್ನು ಸ್ವೀಕರಿಸುತ್ತವೆ. ಸ್ವೀಕರಿಸಿದ ಪ್ರಸ್ತಾವನೆಗಳನ್ನು ಸ್ಥಾಪಿತ ಮಾರ್ಗಸೂಚಿಗಳ ಪ್ರಕಾರ ಮೌಲ್ಯಮಾಪನ ಮಾಡಲಾಗುತ್ತದೆ ಮತ್ತು ನಿರ್ದಿಷ್ಟ ಮಾನದಂಡಗಳನ್ನು ಪೂರೈಸಿದರೆ ಮತ್ತು ಹಣ ಲಭ್ಯವಿದ್ದರೆ ಹಣಕಾಸಿನ ನೆರವು ನೀಡಲಾಗುತ್ತದೆ ಎಂದು ಅವರು ಹೇಳಿದ್ದಾರೆ. …
Read More »ಸಶಸ್ತ್ರ ಪಡೆಗಳ ಧ್ವಜ ದಿನದಂದು ಸಶಸ್ತ್ರ ಪಡೆಗಳಿಗೆ ಕೃತಜ್ಞತೆ ಸಲ್ಲಿಸಿದ ಪ್ರಧಾನಮಂತ್ರಿ
ಸಶಸ್ತ್ರ ಪಡೆಗಳ ಧ್ವಜ ದಿನದ ಸಂದರ್ಭದಲ್ಲಿ ಸಶಸ್ತ್ರ ಪಡೆಗಳ ಧೈರ್ಯಶಾಲಿ ಪುರುಷರು ಮತ್ತು ಮಹಿಳೆಯರಿಗೆ ಪ್ರಧಾನಮಂತ್ರಿ ಅವರು ತಮ್ಮ ಹೃದಯಾಂತರಾಳದ ಕೃತಜ್ಞತೆಯನ್ನು ವ್ಯಕ್ತಪಡಿಸಿದ್ದಾರೆ. ಸಶಸ್ತ್ರ ಪಡೆಗಳ ಸಿಬ್ಬಂದಿಯ ಶಿಸ್ತು, ಸಂಕಲ್ಪ ಮತ್ತು ಅದಮ್ಯ ಮನೋಭಾವವು ರಾಷ್ಟ್ರವನ್ನು ರಕ್ಷಿಸುತ್ತದೆ ಮತ್ತು ಅದರ ಜನರನ್ನು ಬಲಪಡಿಸುತ್ತದೆ ಎಂದು ಅವರು ಹೇಳಿದರು. ಅವರ ಬದ್ಧತೆಯು ಕರ್ತವ್ಯ, ಶಿಸ್ತು ಮತ್ತು ರಾಷ್ಟ್ರದ ಬಗೆಗಿನ ಭಕ್ತಿಯ ಜ್ವಲಂತ ಉದಾಹರಣೆಯಾಗಿದೆ ಎಂದು ಅವರು ಹೇಳಿದರು. ಸಶಸ್ತ್ರ ಪಡೆಗಳ ಶೌರ್ಯ …
Read More »ವಿಮಾನಯಾನ ಕಾರ್ಯಾಚರಣೆಗಳ ತ್ವರಿತ ಪುನಃಸ್ಥಾಪನೆ ಮತ್ತು ಪ್ರಯಾಣಿಕರ ಸೌಲಭ್ಯಕ್ಕಾಗಿ ಕೈಗೊಂಡ ಕ್ರಮಗಳು
ಪ್ರಸ್ತುತ ವಿಮಾನ ಕಾರ್ಯಾಚರಣೆಯ ಸ್ಥಿತಿಗತಿ ಇತ್ತೀಚಿನ ‘ಇಂಡಿಗೋ’ (IndiGo) ಕಾರ್ಯಾಚರಣೆಯ ಬಿಕ್ಕಟ್ಟಿನಿಂದ ಉಂಟಾದ ವ್ಯತ್ಯಯವನ್ನು ಸರಿಪಡಿಸಲು ಮತ್ತು ಪ್ರಯಾಣಿಕರಿಗೆ ನಿರಂತರ ಅನಾನುಕೂಲವಾಗದಂತೆ ನೋಡಿಕೊಳ್ಳಲು ನಾಗರಿಕ ವಿಮಾನಯಾನ ಸಚಿವಾಲಯವು (MoCA) ತ್ವರಿತ ಮತ್ತು ನಿರ್ಣಾಯಕ ಕ್ರಮಗಳನ್ನು ಕೈಗೊಂಡಿದೆ. ದೇಶಾದ್ಯಂತ ವಿಮಾನಯಾನ ಕಾರ್ಯಾಚರಣೆಗಳು ವೇಗವಾಗಿ ಸಹಜ ಸ್ಥಿತಿಗೆ ಮರಳುತ್ತಿವೆ. ಇತರ ಎಲ್ಲಾ ದೇಶೀಯ ವಿಮಾನಯಾನ ಸಂಸ್ಥೆಗಳು ಸುಗಮವಾಗಿ ಮತ್ತು ಪೂರ್ಣ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸುತ್ತಿವೆ. ಅದೇ ಸಮಯದಲ್ಲಿ, ಇಂಡಿಗೋ ವಿಮಾನಗಳ ಕಾರ್ಯಾಚರಣೆಯು ಇಂದು ಸ್ಥಿರವಾದ …
Read More »ಭಾರತದ ಭವಿಷ್ಯದ ಪೀಳಿಗೆಯ ನವೋದ್ಯಮಗಳನ್ನು ರೂಪಿಸುವಲ್ಲಿ ಹಣಕಾಸು ನೆರವಿನ ಜೊತೆಗೆ ಮಾರ್ಗದರ್ಶನ ಕೂಡ ಪ್ರಧಾನ: ಡಾ.ಜಿತೇಂದ್ರ ಸಿಂಗ್
ಸ್ಟಾರ್ಟ್ ಅಪ್ ಗಳು ಭಾರತದ ಭವಿಷ್ಯದ ಬೆಳವಣಿಗೆಯ ಪ್ರಮುಖ ಚಾಲಕ ಶಕ್ತಿ ಎಂದು ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಖಾತೆ ರಾಜ್ಯ ಸಚಿವರಾದ (ಸ್ವತಂತ್ರ ಖಾತೆ) ಡಾ. ಜಿತೇಂದ್ರ ಸಿಂಗ್ ಅವರು ಬಣ್ಣಿಸಿದ್ದಾರೆ. ಮುಂದಿನ ಪೀಳಿಗೆಯ ಸ್ಟಾರ್ಟ್ ಅಪ್ ಗಳನ್ನು ರೂಪಿಸುವಲ್ಲಿ ಹಣಕಾಸು ನೆರವು ಮಾತ್ರವಲ್ಲ, ಮಾರ್ಗದರ್ಶನ ಕೂಡ ಪ್ರಧಾನ ಎಂದು ಅವರು ಪ್ರತಿಪಾದಿಸಿದ್ದಾರೆ. ಇಂದು ನಡೆದ ಭಾರತ ಅಂತಾರಾಷ್ಟ್ರೀಯ ವಿಜ್ಞಾನ ಉತ್ಸವದಲ್ಲಿ (ಐಐಎಸ್ಎಫ್) ಉದ್ಯಮಿಗಳು ಮತ್ತು ವಿದ್ಯಾರ್ಥಿಗಳೊಂದಿಗೆ ಸಂವಾದ …
Read More »ಗುಜರಾತ್ ನ ಅಹಮದಾಬಾದ್ ಮುನ್ಸಿಪಲ್ ಕಾರ್ಪೊರೇಷನ್ ನ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರಿಂದ ಉದ್ಘಾಟನೆ ಮತ್ತು ಶಂಕುಸ್ಥಾಪನೆ
ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಗುಜರಾತ್ ನ ಅಹಮದಾಬಾದ್ ಮುನ್ಸಿಪಲ್ ಕಾರ್ಪೊರೇಷನ್ (AMC) ವ್ಯಾಪ್ತಿಯಲ್ಲಿ ಸುಮಾರು 1,500 ಕೋಟಿ ರೂ. ಮೌಲ್ಯದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿದರು. ಈ ಸಂದರ್ಭದಲ್ಲಿ ಗುಜರಾತ್ ಮುಖ್ಯಮಂತ್ರಿ ಶ್ರೀ ಭೂಪೇಂದ್ರ ಪಟೇಲ್ ಮತ್ತು ಇತರ ಗಣ್ಯರು ಉಪಸ್ಥಿತರಿದ್ದರು. ಸಮಾರಂಭವನ್ನುದ್ದೇಶಿಸಿ ಮಾತನಾಡಿದ ಕೇಂದ್ರ ಗೃಹ ಸಚಿವರು, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ …
Read More »ಉಮೀದ್ ಕೇಂದ್ರೀಯ ಪೋರ್ಟಲ್ ಗಡುವು ಪೂರ್ಣಗೊಂಡಿದೆ
ಭಾರತದಲ್ಲಿ ವಕ್ಫ್ ಆಸ್ತಿಗಳ ನಿರ್ವಹಣೆಗಾಗಿ ಉಮೀದ್ ಕೇಂದ್ರೀಯ ಜಾಲತಾಣವನ್ನು ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವರಾದ ಶ್ರೀ ಕಿರಣ್ ರಿಜಿಜು ಅವರು ಜೂನ್ 6, 2025 ರಂದು ಚಾಲನೆಗೊಳಿಸಿದರು, ಹಾಗೂ ಡಿಸೆಂಬರ್ 6, 2025 ರಂದು (ಶನಿವಾರ) ಅಧಿಕೃತವಾಗಿ ಅಪ್ ಲೋಡ್ ಗಳಿಗೆ ಅವಕಾಶ ಕೊನೆಗೊಳಿಸಿ ಅಂತಿಮವಾಗಿ ಮುಚ್ಚಲಾಯಿತು. ಉಮೀದ್ ಕಾಯ್ದೆ, 1995 ಮತ್ತು ಭಾರತದ ಗೌರವಾನ್ವಿತ ಸುಪ್ರೀಂ ಕೋರ್ಟ್ನ ಸ್ಪಷ್ಟ ನಿರ್ದೇಶನಗಳ ಪ್ರಕಾರ ಅದರ 6 ತಿಂಗಳ ಅವಧಿಯನ್ನು ಪೂರ್ಣಗೊಳಿಸಿತು. …
Read More »ಮಹಾಪರಿನಿರ್ವಾಣ ದಿನದಂದು ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಗೌರವ ನಮನ ಸಲ್ಲಿಸಿದ ಪ್ರಧಾನಮಂತ್ರಿ
ಇಂದು ಮಹಾಪರಿನಿರ್ವಾಣ ದಿವಸದ ಅಂಗವಾಗಿ ಪ್ರಧಾನಮಂತ್ರಿ ಅವರು ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಗೌರವ ನಮನ ಸಲ್ಲಿಸಿದರು. ನ್ಯಾಯ, ಸಮಾನತೆ ಮತ್ತು ಸಾಂವಿಧಾನಿಕತೆಗೆ ಡಾ. ಅಂಬೇಡ್ಕರ್ ಅವರ ಅಚಲ ಬದ್ಧತೆ ಭಾರತದ ರಾಷ್ಟ್ರೀಯ ಪಯಣಕ್ಕೆ ಮಾರ್ಗದರ್ಶನ ನೀಡುತ್ತಲೇ ಇದೆ ಎಂದು ಪ್ರಧಾನಮಂತ್ರಿ ಅವರು ಹೇಳಿದರು. ಮಾನವ ಘನತೆಯನ್ನು ಉಲ್ಲೇಖಿಸುವ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಬಲಪಡಿಸುವ ಡಾ. ಅಂಬೇಡ್ಕರ್ ಅವರ ಸಮರ್ಪಣೆಯಿಂದ ತಲೆಮಾರುಗಳು ಸ್ಫೂರ್ತಿ ಪಡೆದಿವೆ ಎಂದು ಅವರು ಹೇಳಿದರು. …
Read More »
Matribhumi Samachar Kannad