Sunday, December 07 2025 | 08:25:05 AM
Breaking News

Business

ಅಹಮದಾಬಾದ್ ದುರಂತದ ಬಗ್ಗೆ ಪ್ರಧಾನಮಂತ್ರಿ ದುಃಖ ವ್ಯಕ್ತಪಡಿಸಿದ್ದಾರೆ, ತ್ವರಿತ ಮತ್ತು ಪರಿಣಾಮಕಾರಿ ನೆರವಿನ ಭರವಸೆ ನೀಡಿದ್ದಾರೆ

ಅಹಮದಾಬಾದ್ ನಲ್ಲಿ ಇಂದು ಸಂಭವಿಸಿದ ದುರಂತದ ಬಗ್ಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ತೀವ್ರ ದುಃಖ ಮತ್ತು ಆಘಾತ ವ್ಯಕ್ತಪಡಿಸಿದ್ದಾರೆ. ಈ ದುರಂತವು ಇಡೀ ರಾಷ್ಟ್ರವನ್ನು ದಿಗ್ಭ್ರಮೆಗೊಳಿಸಿದೆ ಮತ್ತು ದುಃಖಕ್ಕೆ ತಳ್ಳಿದೆ ಮತ್ತು ಇದು ಪದಗಳಲ್ಲಿ ಹೇಳಲಾಗದಷ್ಟು ಹೃದಯವಿದ್ರಾವಕವಾಗಿದೆ ಎಂದು ಅವರು ಹೇಳಿದ್ದಾರೆ. ಸಂತ್ರಸ್ತರಿಗೆ ತ್ವರಿತ ಮತ್ತು ಪರಿಣಾಮಕಾರಿ ಸಹಾಯವನ್ನು ಖಚಿತಪಡಿಸಿಕೊಳ್ಳಲು ಸಚಿವರು ಮತ್ತು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇನೆ ಎಂದು ಶ್ರೀ ಮೋದಿ ಹೇಳಿದ್ದಾರೆ. ಸಾಮಾಜಿಕ ಮಾಧ್ಯಮ ಎಕ್ಸ್ …

Read More »

ಇಲೇಕ್ಟ್ರಿಸಿಟೀ ಡೇರಿವೇಟಿವ್ಝ ಪ್ರಾರಂಭಿಸಲು ಎಂಸಿಎಕ್ಸ್ ಗೆ ಸೆಬಿ ಅನುಮೋದನೆ

ಭಾರತದ ಇಂಧನ ಮಾರುಕಟ್ಟೆಯ ವಿಕಾಸದಲ್ಲಿ ಒಂದು ಪ್ರಮುಖ ಮೈಲಿಗಲ್ಲು ಮುಂಬೈ: ಭಾರತದ ಪ್ರಮುಖ ಸರಕು ಉತ್ಪನ್ನಗಳ ವಿನಿಮಯ ಕೇಂದ್ರವಾದ ಮಲ್ಟಿ ಕಮಾಡಿಟಿ ಎಕ್ಸ್ಚೇಂಜ್ ಆಫ್ ಇಂಡಿಯಾ ಲಿಮಿಟೆಡ್ (ಎಂಸಿಎಕ್ಸ್), ಭಾರತದ ಇಂಧನ ವ್ಯಾಪಾರ ಕ್ಷೇತ್ರದ ವಿಕಾಸದಲ್ಲಿ ಒಂದು ಪ್ರಮುಖ ಮೈಲಿಗಲ್ಲನ್ನು ಗುರುತಿಸುವ ಇಲೇಕ್ಟ್ರಿಸಿಟೀ ಡೇರಿವೇಟಿವ್ಝ ಪ್ರಾರಂಭಿಸಲು ಸೆಕ್ಯುರಿಟೀಸ್ ಮತ್ತು ಎಕ್ಸ್ಚೇಂಜ್ ಬೋರ್ಡ್ ಆಫ್ ಇಂಡಿಯಾ (ಸೆಬಿ) ನಿಂದ ಅನುಮೋದನೆ ಪಡೆದಿದೆ. ಈ ಬೆಳವಣಿಗೆಯು ನಿಯಂತ್ರಕರಾದ ಸೆಬಿ ಮತ್ತು ಕೇಂದ್ರ ವಿದ್ಯುತ್ …

Read More »

ಭಾರತವು ವಿಶ್ವದ ಆಹಾರ ಬುಟ್ಟಿಯಾಗಲಿದೆ: ಕೇಂದ್ರ ಕೃಷಿ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್

ಕೇಂದ್ರ ಕೃಷಿ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅವರು ಭಾರತವನ್ನು ವಿಶ್ವದ ಆಹಾರ ಬುಟ್ಟಿಯಾಗಿ ಅಭಿವೃದ್ಧಿಪಡಿಸಲಾಗುವುದು ಎಂದು ಘೋಷಿಸಿದ್ದಾರೆ. ದೇಶದ 145 ಕೋಟಿ ನಾಗರಿಕರಿಗೆ ಆಹಾರವನ್ನು ನೀಡುವುದರ ಜೊತೆಗೆ, ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಗಳು, ಕೃಷಿ ವಿಶ್ವವಿದ್ಯಾಲಯಗಳು, ಕೃಷಿ ವಿಜ್ಞಾನ ಕೇಂದ್ರಗಳು (ಕೆವಿಕೆಗಳು), ರೈತರು ಮತ್ತು ವಿಜ್ಞಾನಿಗಳೊಂದಿಗೆ ಸಹಯೋಗದೊಂದಿಗೆ ಈ ಗುರಿಯನ್ನು ಸಾಧಿಸಲು ಸಮಗ್ರ ಮಾರ್ಗಸೂಚಿಯನ್ನು ರೂಪಿಸುತ್ತದೆ ಎಂದು ಅವರು ಒತ್ತಿ ಹೇಳಿದರು. ಬೆಂಗಳೂರಿನ ಐಸಿಎಆರ್-ಐಐಎಚ್‌ಆರ್ ಆವರಣದಲ್ಲಿ ಇಂದು ರೈತರನ್ನು ಉದ್ದೇಶಿಸಿ ಮಾತನಾಡಿದ ಸಚಿವರು, 2047ರ ವೇಳೆಗೆ ವಿಕಸಿತ ಭಾರತ (ಅಭಿವೃದ್ಧಿ ಹೊಂದಿದ ಭಾರತ) ಎಂಬ ಪ್ರಧಾನಮಂತ್ರಿಯವರ ದೃಷ್ಟಿಕೋನಕ್ಕೆ ಅನುಗುಣವಾಗಿ ಈ ಉಪಕ್ರಮವನ್ನು ರೂಪಿಸಲಾಗಿದೆ ಎಂದು ಸ್ಪಷ್ಟಪಡಿಸಿದರು. ಈ ಅಭಿಯಾನದ ಧ್ಯೇಯವಾಕ್ಯ “ವಿಕಸಿತ ಕೃಷಿ ಭಾರತ”. ಈ ಕಾರ್ಯಕ್ರಮದ ಭಾಗವಾಗಿ, “ಪ್ರಯೋಗಾಲಯದಿಂದ ಭೂಮಿಗೆ” ಉಪಕ್ರಮವನ್ನು ಪ್ರಾರಂಭಿಸಲಾಗಿದ್ದು, ವೈಜ್ಞಾನಿಕ ಜ್ಞಾನ ಮತ್ತು ಬೆಂಬಲವನ್ನು ಒದಗಿಸಲು ದೇಶಾದ್ಯಂತ 16,000 ಕ್ಕೂ ಹೆಚ್ಚು ವಿಜ್ಞಾನಿಗಳು ರೈತರೊಂದಿಗೆ  ತೊಡಗಿಸಿಕೊಂಡಿದ್ದಾರೆ. ಕಳೆದ ಹತ್ತು ದಿನಗಳಲ್ಲಿ, 1,896 ತಂಡಗಳು 8,188 ಹಳ್ಳಿಗಳಲ್ಲಿ ಸುಮಾರು 9 ಲಕ್ಷ ರೈತರೊಂದಿಗೆ ಸಂವಾದ ನಡೆಸಿವೆ. ಕರ್ನಾಟಕದಲ್ಲಿಯೇ, ಕೃಷಿ ಮತ್ತು ಸಂಬಂಧಿತ ಇಲಾಖೆಗಳ ವಿಜ್ಞಾನಿಗಳು ಮತ್ತು ಅಧಿಕಾರಿಗಳನ್ನು ಒಳಗೊಂಡ 70ಕ್ಕೂ ಹೆಚ್ಚು ಅಂತರಶಿಸ್ತೀಯ ತಂಡಗಳು ಪ್ರತಿದಿನ ತೋಟಗಳಿಗೆ ಭೇಟಿ ನೀಡುತ್ತಿವೆ. ಅವಶ್ಯಕತೆ ಆಧಾರಿತ, ಸಮಸ್ಯೆ ಆಧಾರಿತ ಕೃಷಿ ಸಂಶೋಧನಾ ಕಾರ್ಯಕ್ರಮಗಳನ್ನು ರೂಪಿಸಲು ಈ ತಂಡಗಳು ರೈತರಿಂದ ನೇರವಾಗಿ ಹಿಮ್ಮಾಹಿತಿಯನ್ನು ಪಡೆದುಕೊಂಡು ದಾಖಲಿಸುತ್ತಿವೆ. ಇಲ್ಲಿಯವರೆಗೆ, 639 ತಂಡಗಳು 2,495 ಹಳ್ಳಿಗಳಿಗೆ ಭೇಟಿ ನೀಡಿ, 2,77,264 ರೈತರೊಂದಿಗೆ ತೊಡಗಿಸಿಕೊಂಡಿವೆ. “ಒಂದು ರಾಷ್ಟ್ರ, ಒಂದು ಕೃಷಿ, ಒಂದು ತಂಡ” ಎಂಬ ಪರಿಕಲ್ಪನೆಯನ್ನು ವಿಕಸಿತ ಕೃಷಿ ಸಂಕಲ್ಪ ಅಭಿಯಾನ ಹೊಂದಿದೆ ಎಂದು ಶ್ರೀ ಚೌಹಾಣ್ ಹೇಳಿದರು. ರೈತರು ತಮ್ಮ ಉತ್ಪನ್ನಗಳಿಗೆ ನ್ಯಾಯಯುತ ಬೆಲೆಯನ್ನು ಪಡೆಯುವುದನ್ನು ಖಚಿತಪಡಿಸಿಕೊಳ್ಳಲು, ಮಾರುಕಟ್ಟೆ ಮಧ್ಯಪ್ರವೇಶ ಯೋಜನೆ (ಎಂ.ಐ.ಎಸ್.) ಅಡಿಯಲ್ಲಿ ಕೇಂದ್ರ ಸರ್ಕಾರವು ಸಾರಿಗೆ ವೆಚ್ಚವನ್ನು ಭರಿಸುತ್ತದೆ ಮತ್ತು ಆ ಮೂಲಕ ಮಾರುಕಟ್ಟೆಗಳಿಗೆ ಪ್ರವೇಶವನ್ನು ಬೆಂಬಲಿಸುತ್ತದೆ. …

Read More »

ಬಲವಾದ ಮತ್ತು ಸ್ಪಂದನಶೀಲ ʻಡಿಆರ್‌ಆರ್‌ʼ ಹಣಕಾಸು ವ್ಯವಸ್ಥೆಯು ಸದೃಢತೆಯ ಮೂಲಾಧಾರವೆಂದು ಭಾರತ ನಂಬಿದೆ: ಡಾ. ಪಿ.ಕೆ.ಮಿಶ್ರಾ

ಪ್ರಧಾನಮಂತ್ರಿಯವರ ಪ್ರಧಾನ ಕಾರ್ಯದರ್ಶಿ ಡಾ. ಪಿ.ಕೆ. ಮಿಶ್ರಾ ಅವರು 2025ರ ಜೂನ್ 4ರಂದು ಜಿನೀವಾದಲ್ಲಿ ನಡೆದ ʻವಿಪತ್ತು ಅಪಾಯ ತಗ್ಗಿಸಲು (ಡಿಆರ್‌ಆರ್) ಹಣಕಾಸು ನೆರವು ಕುರಿತ ಸಚಿವರ ದುಂಡುಮೇಜಿನ ಸಭೆಯನ್ನುದ್ದೇಶಿಸಿ ಮಾತನಾಡಿದರು. ಈ ನಿರ್ಣಾಯಕ ಸಭೆಯನ್ನು ಆಯೋಜಿಸಿದ್ದಕ್ಕಾಗಿ ಅವರು ʻವಿಪತ್ತು ಅಪಾಯ ತಗ್ಗಿಸುವ ಕುರಿತಾದ ವಿಶ್ವಸಂಸ್ಥೆಯ ಕಚೇರಿʼ(ಯುಎನ್‌ಡಿಆರ್‌ಆರ್) ಮತ್ತು ಅದರ ಪಾಲುದಾರರನ್ನು ಶ್ಲಾಘಿಸಿದರು. ಜಿ20 ಅಧ್ಯಕ್ಷತೆ ಮೂಲಕ ಜಾಗತಿಕ ಸಂವಾದವನ್ನು ಮುಂದುವರಿಸುವಲ್ಲಿ ಬ್ರೆಜಿಲ್ ಮತ್ತು ದಕ್ಷಿಣ ಆಫ್ರಿಕಾದ ಕೊಡುಗೆಗಳನ್ನು ಸಹ ಭಾರತ ಗುರುತಿಸಿತು. ʻವಿಪತ್ತು ಅಪಾಯ ತಗ್ಗಿಸಲು ಹಣಕಾಸು ನೆರವುʼ ಎಂಬುದು ಬಾಹ್ಯ ವಿಷಯವಲ್ಲ. ಬದಲಿಗೆ, ಅದು ರಾಷ್ಟ್ರೀಯ ವಿಪತ್ತು ನಿರ್ವಹಣಾ ವ್ಯವಸ್ಥೆಗಳ ಪರಿಣಾಮಕಾರಿ ಕಾರ್ಯನಿರ್ವಹಣೆಯಾಗಿದೆ.  ಜೊತೆಗೆ ಹೆಚ್ಚುತ್ತಿರುವ ಹವಾಮಾನ ಮತ್ತು ವಿಪತ್ತು ಅಪಾಯಗಳ ಹಿನ್ನೆಲೆಯಲ್ಲಿ ಅಭಿವೃದ್ಧಿ ಲಾಭಗಳನ್ನು ರಕ್ಷಿಸಲು ಇದು ಅತ್ಯಂತ ಮುಖ್ಯವಾಗಿದೆ ಎಂದು ಡಾ. ಮಿಶ್ರಾ ಒತ್ತಿಹೇಳಿದರು. ಬಲವಾದ ಮತ್ತು ಸ್ಪಂದನಶೀಲವಾದ ʻವಿಪತ್ತು ಅಪಾಯ ತಗ್ಗಿಸಲು ಹಣಕಾಸು ನೆರವುʼ ವ್ಯವಸ್ಥೆಯು ದೇಶವೊಂದರ ಸದೃಢತೆಗೆ ಮೂಲಾಧಾರವಾಗಿದೆ ಎಂಬ ಭಾರತದ ನಂಬಿಕೆಯನ್ನು ಅವರು ಪುನರುಚ್ಚರಿಸಿದರು. ʻವಿಪತ್ತು ಅಪಾಯ ತಗ್ಗಿಸುವಿಕೆಗಾಗಿ ಹಣಕಾಸು ನೆರವುʼ ಕ್ಷೇತ್ರದಲ್ಲಿ ಭಾರತದ ಪ್ರಯಾಣವನ್ನು ಎತ್ತಿ ತೋರಿದ ಅವರು, ಈ ಮೊದಲಿನ ಹಣಕಾಸು ಆಯೋಗಗಳು ಈ ನಿಟ್ಟಿನಲ್ಲಿ 60 ದಶಲಕ್ಷ ರೂಪಾಯಿಗಳ (ಸುಮಾರು 0.7 ದಶಲಕ್ಷ ಅಮೆರಿಕನ್‌ ಡಾಲರ್‌) ಆರಂಭಿಕ ನಿಧಿ ಹಂಚಿಕೆ ಮಾಡಿವೆ ಎಂದು ಮಾಹಿತಿ ನೀಡಿದರು. ಇಂದು, 15ನೇ ಹಣಕಾಸು ಆಯೋಗದ ಅಡಿಯಲ್ಲಿ ಈ ನಿಟ್ಟಿನಲ್ಲಿ ಒಟ್ಟು ವೆಚ್ಚವು 2.32 ಲಕ್ಷ ಕೋಟಿ ರೂಪಾಯಿಗಳನ್ನು (ಸುಮಾರು 28 ಶತಕೋಟಿ ಅಮೆರಿಕನ್‌ ಡಾಲರ್‌) ಮೀರಿದೆ ಎಂದು ಹೇಳಿದರು. ʻವಿಪತ್ತು ನಿರ್ವಹಣಾ ಕಾಯ್ದೆ-2005ʼರ ಬೆಂಬಲದೊಂದಿಗೆ ರಾಷ್ಟ್ರೀಯ ಮಟ್ಟದಿಂದ ರಾಜ್ಯ ಮತ್ತು ಜಿಲ್ಲಾ ಮಟ್ಟಗಳಿಗೆ ಪೂರ್ವನಿರ್ಧರಿತ, ನಿಯಮ ಆಧಾರಿತ ಹಂಚಿಕೆಗಳ ಮಹತ್ವವನ್ನು ಮಿಶ್ರಾ ಅವರು ಒತ್ತಿ ಹೇಳಿದರು. ಈ ರೂಪಾಂತರವು ವಿಪತ್ತು ಹಣಕಾಸು ಪ್ರತಿಕ್ರಿಯಾತ್ಮಕವಾಗಿರುವುದರ ಬದಲು, ರಚನಾತ್ಮಕ ಮತ್ತು ನಿರೀಕ್ಷಿತವಾಗಿರುವಂತೆ ಖಾತ್ರಿಪಡಿಸಿದೆ ಎಂದು ಅವರು ಹೇಳಿದರು. ನಾಲ್ಕು ಪ್ರಮುಖ ತತ್ವಗಳ ಮೇಲೆ ನಿರ್ಮಿಸಲಾದ ಭಾರತದ ʻವಿಪತ್ತು ಅಪಾಯ ತಗ್ಗಿಸುವಿಕೆಗಾಗಿ ಹಣಕಾಸು ನೆರವುʼ ಕಾರ್ಯವಿಧಾನವನ್ನು ಅವರು ಶ್ರೀ ಮಿಶ್ರಾ ವಿವರಿಸಿದರು. ಮೊದಲನೆಯ ತತ್ವವೆಂದರೆ ಸನ್ನದ್ಧತೆ, ಅಪಾಯ ತಗ್ಗಿಸುವಿಕೆ, …

Read More »

ಸೋನಿಯ ವಾಯಿದೆ 3,573 ರೂ. ಮತ್ತು ಬೆಳ್ಳಿಯ ವಾಯಿದೆ 3,928 ರೂ. ಕುಸಿತ: ಕಚ್ಚಾ ತೈಲ ವಾಯಿದೆ 408 ರೂ. ಇಳಿಕೆ

ನೈಸರ್ಗಿಕ ಅನಿಲ ವಾಯಿದೆಯಲ್ಲಿ 27.10 ರೂ. ಏರಿಕೆ: ಹತ್ತಿ-ಕ್ಯಾಂಡಿ ವಾಯಿದೆಯಲ್ಲಿ 1,760 ರೂ. ಕುಸಿತ: ಮೆಂಥಾ ತೈಲದಲ್ಲಿ 6.50 ರೂ. ಮೃದುತೆ: ಲೋಹಗಳ ವಾಯಿದೆಗಳಲ್ಲಿ ಎಲ್ಲೆಡೆ ಕುಸಿತ: ಸರಕು ವಾಯಿದೆಗಳಲ್ಲಿ 188,600 ಕೋಟಿ ರೂ. ಮತ್ತು ಸರಕು ಆಯ್ಕೆಗಳಲ್ಲಿ 1,402,398 ಕೋಟಿ ರೂ. ವಹಿವಾಟು ದಾಖಲು: ಸೋನ-ಬೆಳ್ಳಿಯ ವಾಯಿದೆಗಳಲ್ಲಿ 147,636 ಕೋಟಿ ರೂ. ವ್ಯಾಪಾರ: ಬುಲಿಯನ್ ಸೂಚ್ಯಂಕ ಬುಲ್ಡೆಕ್ಸ್ ಫ್ಯೂಚರ್ಸ್ 21,323 ಅಂಕಗಳ ಮಟ್ಟದಲ್ಲಿ ಮುಂಬೈ: ದೇಶದ ಪ್ರಮುಖ ಸರಕು …

Read More »

ಕಡಿಮೆ ಮೌಲ್ಯದ ಭೀಮ್‌-ಯುಪಿಐ ವಹಿವಾಟುಗಳನ್ನು (ಪಿ2ಎಂ) ಉತ್ತೇಜಿಸಲು ಪ್ರೋತ್ಸಾಹಕ ಯೋಜನೆಗೆ ಸಂಪುಟದ ಅನುಮೋದನೆ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ, 2024-25ನೇ ಹಣಕಾಸು ವರ್ಷಕ್ಕೆ ‘ವ್ಯಕ್ತಿಯಿಂದ ವ್ಯಾಪಾರಿಗೆ (ಪಿ2ಎಂ) ಕಡಿಮೆ ಮೌಲ್ಯದ ಭೀಮ್-ಯುಪಿಐ ವಹಿವಾಟುಗಳನ್ನು ಉತ್ತೇಜಿಸಲು ಪ್ರೋತ್ಸಾಹಕ ಯೋಜನೆ’ಯನ್ನು ಈ ಕೆಳಗಿನ ರೀತಿಯಲ್ಲಿ ಅನುಮೋದಿಸಿದೆ:        ಕಡಿಮೆ ಮೌಲ್ಯದ ಭೀಮ್-ಯುಪಿಐ ವಹಿವಾಟುಗಳನ್ನು (ಪಿ2ಎಂ) ಉತ್ತೇಜಿಸಲು ಪ್ರೋತ್ಸಾಹಕ ಯೋಜನೆಯನ್ನು 01.04.2024 ರಿಂದ 31.03.2025 ರವರೆಗೆ ಅಂದಾಜು 1,500 ಕೋಟಿ ವೆಚ್ಚದಲ್ಲಿ ಜಾರಿಗೆ ತರಲಾಗುವುದು.   ಸಣ್ಣ ವ್ಯಾಪಾರಿಗಳಿಗೆ …

Read More »

ಅಸ್ಸಾಂನ ನಮ್ರೂಪ್‌ ನ ಬ್ರಹ್ಮಪುತ್ರ ವ್ಯಾಲಿ ಫರ್ಟಿಲೈಸರ್‌ ಕಾರ್ಪೊರೇಷನ್‌ ಲಿಮಿಟೆಡ್‌ (ಬಿವಿಎಫ್‌ಸಿಎಲ್‌) ನ ಹಾಲಿ ಆವರಣದಲ್ಲಿಹೊಸ ಬ್ರೌನ್‌ ಫೀಲ್ಡ್‌ ಅಮೋನಿಯಾ-ಯೂರಿಯಾ ಕಾಂಪ್ಲೆಕ್ಸ್‌ ನಮ್ರೂಪ್‌ 4 ರಸಗೊಬ್ಬರ ಘಟಕ ಸ್ಥಾಪನೆಗೆ ಸಂಪುಟದ ಅನುಮೋದನೆ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಅಸ್ಸಾಂನ ನಮ್ರೂಪ್‌ನ ಬ್ರಹ್ಮಪುತ್ರ ವ್ಯಾಲಿ ಫರ್ಟಿಲೈಸರ್‌ ಕಾರ್ಪೊರೇಷನ್‌ ಲಿಮಿಟೆಡ್‌ (ಬಿವಿಎಫ್‌ಸಿಎಲ್‌) ನ ಹಾಲಿ ಆವರಣದಲ್ಲಿ ಯೂರಿಯಾ ಉತ್ಪಾದನೆಯ ವಾರ್ಷಿಕ 12.7 ಲಕ್ಷ ಮೆಟ್ರಿಕ್‌ ಟನ್‌ (ಎಲ್‌ಎಂಟಿ) ಸಾಮರ್ಥ್ಯ‌ದ ಹೊಸ ಬ್ರೌನ್‌ ಫೀಲ್ಡ್‌ ಅಮೋನಿಯಾ-ಯೂರಿಯಾ ಸಂಕೀರ್ಣವನ್ನು ಅಂದಾಜು ಒಟ್ಟು ಯೋಜನಾ ವೆಚ್ಚ 10,601.40 ಕೋಟಿ ರೂ.ಗಳ ಅಂದಾಜು ವೆಚ್ಚದಲ್ಲಿ ಸ್ಥಾಪಿಸುವ ಪ್ರಸ್ತಾಪಕ್ಕೆ ತನ್ನ ಅನುಮೋದನೆ ನೀಡಿದೆ. ಜಂಟಿ …

Read More »

ಪರಿಷ್ಕೃತ ರಾಷ್ಟ್ರೀಯ ಡೇರಿ ಅಭಿವೃದ್ಧಿ ಕಾರ್ಯಕ್ರಮ(ಎನ್‌ಪಿಡಿಡಿ)ಕ್ಕೆ ಕೇಂದ್ರ ಸಂಪುಟದ ಅನುಮೋದನೆ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆಯು ಪರಿಷ್ಕೃತ ರಾಷ್ಟ್ರೀಯ ಡೇರಿ ಅಭಿವೃದ್ಧಿ ಕಾರ್ಯಕ್ರಮ  (ಎನ್‌ಪಿಡಿಡಿ)ಕ್ಕೆ ಅನುಮೋದನೆ ನೀಡಿದೆ. ಕೇಂದ್ರ ಸ್ವಾಮ್ಯದ ಯೋಜನೆಯಾದ ಪರಿಷ್ಕೃತ ಎನ್‌ಪಿಡಿಡಿಗೆ ಹೆಚ್ಚುವರಿಯಾಗಿ 1000 ಕೋಟಿ ರೂ. ಒದಗಿಸಲಾಗಿದೆ. ಇದರೊಂದಿಗೆ, 15ನೇ ಹಣಕಾಸು ಆಯೋಗದ ಅವಧಿ(2021-22ರಿಂದ 2025-26ರ ವರೆಗೆ)ಯಲ್ಲಿ ಒಟ್ಟು ಬಜೆಟ್ ಗಾತ್ರವನ್ನು 2,790 ಕೋಟಿ ರೂ.ಗೆ ಹೆಚ್ಚಿಸಿದಂತಾಗಿದೆ. ಈ ಉಪಕ್ರಮವು ಡೇರಿ ಮೂಲಸೌಕರ್ಯ ಆಧುನೀಕರಣ ಮತ್ತು ವಿಸ್ತರಣೆ ಮೇಲೆ …

Read More »

ಫೆಬ್ರವರಿ 16 ರಂದು ದೆಹಲಿಯಲ್ಲಿ ನಡೆಯಲಿರುವ “ಭಾರತ್ ಟೆಕ್ಸ್ 2025”ರಲ್ಲಿ ಭಾಗವಹಿಸಲಿರುವ ಪ್ರಧಾನಮಂತ್ರಿ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಫೆಬ್ರವರಿ 16, 2025 ರಂದು ಸಂಜೆ 4 ಗಂಟೆಗೆ ನವದೆಹಲಿಯ ಭಾರತ ಮಂಟಪದಲ್ಲಿ ನಡೆಯುವ “ಭಾರತ್ ಟೆಕ್ಸ್ 2025”ರಲ್ಲಿ ಭಾಗವಹಿಸಲಿದ್ದಾರೆ. ಈ ಸಂದರ್ಭದಲ್ಲಿ ಅವರು ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಫೆಬ್ರವರಿ 14-17,2025 ರಿಂದ ಭಾರತ ಮಂಟಪದಲ್ಲಿ ನಡೆಯಲಿರುವ ಬೃಹತ್ ಜಾಗತಿಕ ಕಾರ್ಯಕ್ರಮವಾದ “ಭಾರತ್ ಟೆಕ್ಸ್ 2025” ವಿಶಿಷ್ಟ ಕಾರ್ಯಕ್ರಮವಾಗಿದೆ. ಏಕೆಂದರೆ, ಇದು ಕಚ್ಚಾ ವಸ್ತುಗಳಿಂದ ಹಿಡಿದು, ಪರಿಕರಗಳು ಸೇರಿದಂತೆ ಸಿದ್ಧಪಡಿಸಿದ ಉತ್ಪನ್ನಗಳವರೆಗೆ ಸಂಪೂರ್ಣ ಜವಳಿ …

Read More »

ಸಂಸತ್ತಿನಲ್ಲಿ, ಕೇಂದ್ರ ಹಣಕಾಸು ಸಚಿವರಾದ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ಭಾರತದ ಆರ್ಥಿಕತೆ ಮತ್ತು ನಾವು ಕೈಗೊಳ್ಳುತ್ತಿರುವ ಸುಧಾರಣಾ ಪಥದ ಬಗ್ಗೆ ಸ್ಪಷ್ಟವಾದ ಚಿತ್ರಣವನ್ನು ನೀಡಿದ್ದಾರೆ: ಪ್ರಧಾನಮಂತ್ರಿ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಕೇಂದ್ರ ಹಣಕಾಸು ಸಚಿವರಾದ ಶ್ರೀಮತಿ ಅವರನ್ನು ಶ್ಲಾಘಿಸಿದ್ದಾರೆ. ಸಂಸತ್ತಿನಲ್ಲಿ ಶ್ರೀಮತಿ ನಿರ್ಮಲಾ ಸೀತಾರಾಮನ್ ಮಾಡಿದ ಭಾಷಣದಲ್ಲಿ, “ಇದು ಭಾರತದ ಆರ್ಥಿಕತೆ ಮತ್ತು ಕೇಂದ್ರ ಸರ್ಕಾರವು ಕೈಗೊಳ್ಳುತ್ತಿರುವ ಸುಧಾರಣಾ ಪಥದ ಸ್ಪಷ್ಟ ಚಿತ್ರಣವನ್ನು ಒದಗಿಸುತ್ತದೆ” ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹೇಳಿದ್ದಾರೆ.  ಪ್ರಧಾನಮಂತ್ರಿಯವರು ಎಕ್ಸ್ ತಾಣದಲ್ಲಿ ಈ ರೀತಿ ಸಂದೇಶ ಹಂಚಿಕೊಂಡಿದ್ದಾರೆ; “ಸಂಸತ್ತಿನಲ್ಲಿ ತಮ್ಮ ಹೇಳಿಕೆಗಳ ಸಂದರ್ಭದಲ್ಲಿ, ಕೇಂದ್ರ ಹಣಕಾಸು ಸಚಿವರಾದ ಶ್ರೀಮತಿ …

Read More »