Thursday, June 18 2026 | 11:16:02 AM
Breaking News

National

ಕಾರ್ಮಿಕ ಕಾನೂನುಗಳನ್ನು ಸರಳೀಕರಿಸಲು ಮತ್ತು ಸುವ್ಯವಸ್ಥಿತಗೊಳಿಸಲು ನಾಲ್ಕು ಕಾರ್ಮಿಕ ಸಂಹಿತೆಗಳ ಜಾರಿಯನ್ನು ಘೋಷಿಸಿದ ಕೇಂದ್ರ ಸರ್ಕಾರ

ಭಾರತ ಸರ್ಕಾರವು ನಾಲ್ಕು ಕಾರ್ಮಿಕ ಸಂಹಿತೆಗಳನ್ನು – ವೇತನ ಸಂಹಿತೆ 2019, ಕೈಗಾರಿಕಾ ಸಂಬಂಧಗಳ ಸಂಹಿತೆ 2020, ಸಾಮಾಜಿಕ ಭದ್ರತಾ ಸಂಹಿತೆ 2020 ಮತ್ತು ಔದ್ಯೋಗಿಕ ಸುರಕ್ಷತೆ, ಆರೋಗ್ಯ ಮತ್ತು ದುಡಿಯುವ ಪರಿಸ್ಥಿತಿಗಳ ಸಂಹಿತೆ 2020 – ಇವುಗಳನ್ನು 2025ರ ನವೆಂಬರ್ 21 ರಿಂದ ಜಾರಿಗೆ ಬರುವಂತೆ ಅನುಷ್ಠಾನಗೊಳಿಸುವ ಐತಿಹಾಸಿಕ ನಿರ್ಧಾರವೊಂದನ್ನು ಘೋಷಿಸಿದೆ,  ಇದು ಹಾಲಿ ಅಸ್ತಿತ್ವದಲ್ಲಿರುವ 29 ಕಾರ್ಮಿಕ ಕಾನೂನುಗಳನ್ನು ಏಕರೂಪಗೊಳಿಸಿದೆ. ಕಾರ್ಮಿಕ ನಿಯಮಗಳನ್ನು ಆಧುನೀಕರಿಸುವ ಮೂಲಕ, ಕಾರ್ಮಿಕರ ಕಲ್ಯಾಣವನ್ನು ಹೆಚ್ಚಿಸುವ ಮೂಲಕ ಮತ್ತು ಬದಲಾಗುತ್ತಿರುವ ಜಗತ್ತಿಗೆ ಅನುಗುಣವಾಗಿ ಕಾರ್ಮಿಕ ಪೂರಕ ವ್ಯವಸ್ಥೆಯನ್ನು ಸಂಯೋಜಿಸುವ ಮೂಲಕ ಈ ಮಹತ್ವಾಕಾಂಕ್ಷೆಯ ಕ್ರಮವು ಆತ್ಮನಿರ್ಭರ ಭಾರತಕ್ಕಾಗಿ ಕಾರ್ಮಿಕ ಸುಧಾರಣೆಗಳಿಗೆ ಚಾಲನೆ ನೀಡುವ ಭವಿಷ್ಯಕ್ಕೆ ಸಿದ್ಧವಾಗಿರುವ ದುಡಿಯುವ ಪಡೆ ಸೃಷ್ಟಿಮತ್ತು ಸ್ಥಿತಿಸ್ಥಾಪಕ ಕೈಗಾರಿಕೆಗಳಿಗೆ ಭದ್ರವಾದ ಅಡಿಪಾಯವನ್ನು …

Read More »

2025ರ ವಿಶ್ವ ಶೌಚಾಲಯ ದಿನದಂದು ಜಲಶಕ್ತಿ ಸಚಿವಾಲಯವು “ಹಮಾರಾ ಶೌಚಾಲಯ, ಹಮಾರಾ ಭವಿಷ್ಯ” ಅಭಿಯಾನವನ್ನು ಪ್ರಾರಂಭಿಸಿದೆ

ಜಲಶಕ್ತಿ ಸಚಿವಾಲಯದ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯು 2025 ರ ವಿಶ್ವ ಶೌಚಾಲಯ ದಿನದಂದು ‘ಹಮಾರಾ ಶೌಚಾಲಯ, ಹಮಾರಾ ಭವಿಷ್ಯ’ (ನಮ್ಮ ಶೌಚಾಲಯ, ಹಮಾರಾ ಭವಿಷ್ಯ) ಎಂಬ ರಾಷ್ಟ್ರವ್ಯಾಪಿ ಅಭಿಯಾನವನ್ನು ಪ್ರಾರಂಭಿಸಿತು. ‘ಹಮಾರಾ ಶೌಚಾಲಯ, ಹಮಾರಾ ಭವಿಷ್ಯ’ ಅಭಿಯಾನವು ಇಂದು ಸಮುದಾಯಗಳಿಗೆ ಸುರಕ್ಷಿತ ನೈರ್ಮಲ್ಯವನ್ನು ಒದಗಿಸಲು ಮತ್ತು ಸ್ವಚ್ಛ ಮತ್ತು ಆರೋಗ್ಯಕರ ಭವಿಷ್ಯಕ್ಕಾಗಿ ತಯಾರಿ ನಡೆಸಲು ಶೌಚಾಲಯಗಳ ಮಹತ್ವವನ್ನು ಪುನರುಚ್ಚರಿಸುತ್ತದೆ ಮತ್ತು ಅವುಗಳ ಸರಿಯಾದ ನಿರ್ವಹಣೆಯನ್ನು ಖಚಿತಪಡಿಸುತ್ತದೆ. ಇದು …

Read More »

ಬೆಂಗಳೂರಿನ ರಾಷ್ಟ್ರೀಯ ಕೃಷಿ ಕೀಟ ಸಂಪನ್ಮೂಲಗಳ ಬ್ಯೂರೋದಲ್ಲಿ ಪಿಎಂ-ಕಿಸಾನ್ 21ನೇ ಕಂತು ಬಿಡುಗಡೆಯ ನೇರ ಪ್ರಸಾರ ಕಾರ್ಯಕ್ರಮ

ಭೂ ಹಿಡುವಳಿದಾರ ರೈತರ ಆರ್ಥಿಕ ಅಗತ್ಯಗಳನ್ನು ಬೆಂಬಲಿಸಲು ಭಾರತ ಸರ್ಕಾರದ ಪ್ರಮುಖ ಉಪಕ್ರಮವಾದ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (ಪಿಎಂ-ಕಿಸಾನ್) ಯೋಜನೆಯ 21ನೇ ಕಂತನ್ನು ಇಂದು ಬೆಂಗಳೂರಿನ ಯಲಹಂಕದ ರಾಷ್ಟ್ರೀಯ ಕೃಷಿ ಕೀಟ ಸಂಪನ್ಮೂಲಗಳ ಬ್ಯೂರೋನಲ್ಲಿ ಆಯೋಜಿಸಲಾದ ರಾಷ್ಟ್ರೀಯ ಮಟ್ಟದ ಕಾರ್ಯಕ್ರಮದಲ್ಲಿ ಬಿಡುಗಡೆ ಮಾಡಲಾಯಿತು. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಲೋಕಸಭಾ (ಚಿಕ್ಕಬಳ್ಳಾಪುರ ಕ್ಷೇತ್ರ)ದ ಗೌರವಾನ್ವಿತ ಸಂಸದರಾದ ಡಾ. ಕೆ. ಸುಧಾಕರ್ ಮತ್ತು ಗೌರವಾನ್ವಿತ ಅತಿಥಿಯಾಗಿ ಲೋಕಸಭಾ (ಕೋಲಾರ …

Read More »

ಭಾರತದ ರಾಷ್ಟ್ರಪತಿ ಅವರು ಆರನೇ ʻರಾಷ್ಟ್ರೀಯ ಜಲ ಪ್ರಶಸ್ತಿʼಗಳು ಮತ್ತು ʻಜಲ ಸಂಚಾಯ್-ಜನ ಭಾಗೀದಾರಿ ಪ್ರಶಸ್ತಿʼಗಳನ್ನು ಪ್ರದಾನ ಮಾಡಿದರು

ಭಾರತದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು ಇಂದು (ನವೆಂಬರ್ 18, 2025) ನವದೆಹಲಿಯಲ್ಲಿ ನಡೆದ ಸಮಾರಂಭದಲ್ಲಿ ಆರನೇ ‘ರಾಷ್ಟ್ರೀಯ ಜಲ ಪ್ರಶಸ್ತಿ’ಗಳು ಮತ್ತು ‘ಜಲ ಸಂಚಾಯ್-ಜನ ಭಾಗೀದಾರಿ ಪ್ರಶಸ್ತಿ’ಗಳನ್ನು ಪ್ರದಾನ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ರಾಷ್ಟ್ರಪತಿ ಅವರು, ಮಾನವ ನಾಗರಿಕತೆಯ ಕಥೆಯು ನದಿ ಕಣಿವೆಗಳಲ್ಲಿ, ಸಮುದ್ರ ತೀರಗಳಲ್ಲಿ ಮತ್ತು ವಿವಿಧ ಜಲಮೂಲಗಳ ಸುತ್ತಲೂ ನೆಲೆಸಿದ ಗುಂಪುಗಳ ಕಥೆಯೇ ಆಗಿದೆ ಎಂದು ಹೇಳಿದರು. ನಮ್ಮ ಸಂಪ್ರದಾಯದಲ್ಲಿ, ನದಿಗಳು, ಸರೋವರಗಳು …

Read More »

ಕೃಷಿ ಮತ್ತು ರೈತ ಕಲ್ಯಾಣ ಸಚಿವಾಲಯದಿಂದ ರೈತರಿಗೆ ಮತ್ತೊಂದು ಮಹತ್ವದ ಪರಿಹಾರ

ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯವು ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿ (PMFBY) ರೈತರಿಗೆ ಪ್ರಮುಖ ಸೌಲಭ್ಯವೊಂದನ್ನು ವಿಸ್ತರಿಸಿದೆ. ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯ ಅಡಿಯಲ್ಲಿ ‘ಕಾಡು ಪ್ರಾಣಿಗಳ ದಾಳಿ’ ಮತ್ತು ‘ಭತ್ತದ ಗದ್ದೆಗಳು ಜಲಾವೃತವಾಗುವಿಕೆ’ಯಿಂದ ಉಂಟಾಗುವ ಬೆಳೆ ನಷ್ಟವನ್ನು ಸರಿದೂಗಿಸುವ ವಿಧಾನಗಳನ್ನು ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯ ಈಗ ಮಾನ್ಯ ಮಾಡಿದೆ. ಪರಿಷ್ಕೃತ ಚೌಕಟ್ಟಿನ ಅಡಿಯಲ್ಲಿ, ಕಾಡು ಪ್ರಾಣಿಗಳ ದಾಳಿಯಿಂದಾಗುವ ಬೆಳೆ ನಷ್ಟವನ್ನು …

Read More »

ಈ ವರ್ಷದ ಹಿಂಗಾರು (ರಬಿ) ಬೆಳೆ ಅವಧಿಯಲ್ಲಿ ಬಿತ್ತನೆಯು 208 ಲಕ್ಷ ಹೆಕ್ಟೇರ್ ಮೀರಿದೆ

ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಇಲಾಖೆಯು ನವೆಂಬರ್ 11, 2025 ರಂದು ರಬಿ ಬೆಳೆಗಳ ಅವಧಿಯಲ್ಲಿ ಕೃಷಿ ಪ್ರದೇಶದ ವ್ಯಾಪ್ತಿಯ ಪ್ರಗತಿಯನ್ನು ಬಿಡುಗಡೆ ಮಾಡಿದೆ. ವಿಸ್ತೀರ್ಣ: ಲಕ್ಷ ಹೆಕ್ಟೇರ್‌ಗಳಲ್ಲಿ ಕ್ರ.ಸಂ.   ಬೆಳೆ ಸಾಮಾನ್ಯ ಪ್ರದೇಶ  (2019-20 ರಿಂದ  2023-24) ಬಿತ್ತನೆಯ ಪ್ರದೇಶ 2024-25 ಕ್ಕಿಂತ  ಹೆಚ್ಚಳ (+) / ಕಡಿತ (-) 2025 – 26 2024-25 1 ಗೋಧಿ 312.35 66.23 56.55 9.68 2 ಅಕ್ಕಿ …

Read More »

2025ನೇ ಇಸವಿಯಲ್ಲಿ ಗ್ರಾಹಕ ನ್ಯಾಯದ ವ್ಯವಸ್ಥೆಯಲ್ಲಿ ಇ-ಜಾಗೃತಿ ಕ್ರಾಂತಿಯನ್ನುಂಟು ಮಾಡಿದೆ: ತ್ವರಿತ ಪರಿಹಾರವನ್ನು ನೀಡುವುದು ಮತ್ತು 2024 ಮಾನದಂಡಗಳನ್ನು ಮೀರಿದ ಫಲಿತಾಂಶ ನೀಡಿದೆ

ಗ್ರಾಹಕರ ಹಕ್ಕುಗಳಿಗೆ ಪ್ರಮುಖ ಉತ್ತೇಜನವಾಗಿ, ಕೇಂದ್ರ ಗ್ರಾಹಕ ವ್ಯವಹಾರಗಳ ಇಲಾಖೆಯ ಇ-ಜಾಗೃತಿ ವೇದಿಕೆಯು ಅತ್ಯುತ್ತಮ ಪರಿವರ್ತಿತವಾಗಿದೆ ಹಾಗೂ ಕುಂದುಕೊರತೆ ಪರಿಹಾರದ ಡಿಜಿಟಲ್ ವ್ಯವಸ್ಥೆಯಾಗಿ ಹೊರಹೊಮ್ಮಿದೆ. ಜನವರಿ 1, 2025 ರಂದು ಪ್ರಾರಂಭವಾದಾಗಿನಿಂದ ಎರಡು ಲಕ್ಷಕ್ಕೂ ಹೆಚ್ಚು ಬಳಕೆದಾರರನ್ನು ನೋಂದಾಯಿಸಿದ್ದಾರೆ. ವೇದಿಕೆಯು ಕಾಗದಪತ್ರಗಳನ್ನು ಕಡಿಮೆ ಮಾಡುವ ಮೂಲಕ, ಗ್ರಾಹಕರ ಪ್ರಯಾಣವನ್ನು ಕಡಿಮೆ ಮಾಡುವ ಮೂಲಕ ಮತ್ತು ಭೌತಿಕ ದಾಖಲಾತಿಗಳನ್ನು ಕಡಿತಗೊಳಿಸುವ ಮೂಲಕ ನಾಗರಿಕರಿಗೆ ಕಾರ್ಯವಿಧಾನಗಳನ್ನು ಸುಗಮಗೊಳಿಸುತ್ತದೆ, ಇದರಿಂದಾಗಿ ಪರಿಸರ ಸುಸ್ಥಿರತೆಯನ್ನು ಉತ್ತೇಜಿಸುತ್ತದೆ.  ಇದು ಭೌಗೋಳಿಕ …

Read More »

ಎಲ್ಲ ವಯೋಮಾನದವರಿಗೆ ದೈಹಿಕ ಸಾಮರ್ಥ್ಯ ಅವಶ್ಯ: ಸಚಿವರಾದ ಸುಶ್ರೀ ಶೋಭಾ ಕರಂದ್ಲಾಜೆ

ರಾಷ್ಟ್ರೀಯ ‘ಫಿಟ್ ಇಂಡಿಯಾ’ ಮತ್ತು ‘ವಿಕಸಿತ ಭಾರತಕ್ಕಾಗಿ ಫಿಟ್ ಯುವ’ ಅಭಿಯಾನಗಳ ಅಡಿಯಲ್ಲಿ ಕ್ರಿಯಾತ್ಮಕ ಉಪಕ್ರಮವಾದ ಸಂಸದ್ ಖೇಲ್ ಮಹೋತ್ಸವಕ್ಕೆ ಇಂದು, ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಲ್ಲಿ ಚಾಲನೆ ನೀಡಲಾಯಿತು. ಸೆಪ್ಟೆಂಬರ್ 27 ರಿಂದ ಡಿಸೆಂಬರ್ 25, 2025 ರವರೆಗೆ ನಡೆಯಲಿರುವ ಈ ಕಾರ್ಯಕ್ರಮವನ್ನು ಕೇಂದ್ರ ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಉದ್ಯಮಗಳು ಹಾಗೂ ಕಾರ್ಮಿಕ ಮತ್ತು ಉದ್ಯೋಗ ಖಾತೆ ರಾಜ್ಯ ಸಚಿವರು ಮತ್ತು ಬೆಂಗಳೂರು ಉತ್ತರ ಲೋಕಸಭಾ …

Read More »

ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಲೋಕಸಭೆಯಲ್ಲಿ ಸಂವಿಧಾನ (ನೂರ ಮೂವತ್ತನೇ ತಿದ್ದುಪಡಿ) ಮಸೂದೆ, 2025, ಕೇಂದ್ರಾಡಳಿತ ಪ್ರದೇಶಗಳ (ತಿದ್ದುಪಡಿ) ಮಸೂದೆ, 2025 ಮತ್ತು ಜಮ್ಮು ಮತ್ತು ಕಾಶ್ಮೀರ ಪುನರ್ರಚನೆ (ತಿದ್ದುಪಡಿ) ಮಸೂದೆ, 2025 ಗಳನ್ನು ಮಂಡಿಸಿದರು

ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಇಂದು ಲೋಕಸಭೆಯಲ್ಲಿ ಸಂವಿಧಾನ (ನೂರ ಮೂವತ್ತನೇ ತಿದ್ದುಪಡಿ) ಮಸೂದೆ, 2025, ಕೇಂದ್ರಾಡಳಿತ ಪ್ರದೇಶಗಳ (ತಿದ್ದುಪಡಿ) ಮಸೂದೆ, 2025 ಮತ್ತು ಜಮ್ಮು ಮತ್ತು ಕಾಶ್ಮೀರ ಪುನರ್ರಚನೆ (ತಿದ್ದುಪಡಿ) ಮಸೂದೆ, 2025 ಗಳನ್ನು ಮಂಡಿಸಿದರು. ದೇಶದಲ್ಲಿ ರಾಜಕೀಯ ಭ್ರಷ್ಟಾಚಾರದ ವಿರುದ್ಧ ಮೋದಿ ಸರ್ಕಾರದ ಬದ್ಧತೆ ಮತ್ತು ಸಾರ್ವಜನಿಕ ಆಕ್ರೋಶವನ್ನು ಪರಿಗಣಿಸಿ, ಲೋಕಸಭಾಧ್ಯಕ್ಷರ ಒಪ್ಪಿಗೆಯೊಂದಿಗೆ ಇಂದು ಸಂಸತ್ತಿನಲ್ಲಿ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು …

Read More »

ಕೇಂದ್ರ ಗೃಹ ಮತ್ತು ಸಹಕಾರ ಖಾತೆ ಸಚಿವರಾದ ಶ್ರೀ ಅಮಿತ್ ಶಾ ಅವರು ಹರ್ ಘರ್ ತಿರಂಗಾ’ ಅಭಿಯಾನದ ಅಡಿಯಲ್ಲಿ ಇಂದು ನವದೆಹಲಿಯ ತಮ್ಮ ನಿವಾಸದಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಿದರು

ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಇಂದು ನವದೆಹಲಿಯ ತಮ್ಮ ನಿವಾಸದಲ್ಲಿ ‘ಹರ್ ಘರ್ ತಿರಂಗಾ’ ಅಭಿಯಾನದ ಅಡಿಯಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಿದರು. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಪ್ರಾರಂಭವಾದ ‘ಹರ್ ಘರ್ ತಿರಂಗಾ’ ಅಭಿಯಾನವು ಇಂದು ದೇಶವನ್ನು ಏಕತೆಯ ಎಳೆಯಲ್ಲಿ ಬಂಧಿಸುವ ಮತ್ತು ದೇಶಭಕ್ತಿಯ ಭಾವನೆಯನ್ನು ಬಲಪಡಿಸುವ ಸಾಮೂಹಿಕ ಅಭಿಯಾನವಾಗಿ ಮಾರ್ಪಟ್ಟಿದೆ ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ …

Read More »