Tuesday, April 07 2026 | 05:26:37 PM
Breaking News

ನವೀಕರಿಸಬಹುದಾದ ಇಂಧನ ಸಾಮರ್ಥ್ಯವನ್ನು ಸ್ಥಾಪಿಸಲು ಎನ್ ಟಿ ಪಿ ಸಿ ರಿನ್ಯೂಯಬಲ್ ಎನರ್ಜಿ ಲಿಮಿಟೆಡ್ ಮತ್ತು ಅದರ ಇತರ ಜಂಟಿ ಉದ್ಯಮಗಳು/ ಅಂಗಸಂಸ್ಥೆಗಳಲ್ಲಿ ಹೂಡಿಕೆ ಮಾಡಲು ಎನ್ ಟಿ ಪಿ ಸಿ ಲಿಮಿಟೆಡ್ ಗೆ ಹೆಚ್ಚಿನ ಅಧಿಕಾರ ನೀಡಲು ಸಂಪುಟ ಅನುಮೋದನೆ ನೀಡಿದೆ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿಯು, ಮಹಾರತ್ನ ಸಿ ಪಿ ಎಸ್ ಇ ಗಳಿಗೆ ಅಧಿಕಾರ ನಿಯೋಜನೆಗಾಗಿ ಅಸ್ತಿತ್ವದಲ್ಲಿರುವ ಮಾರ್ಗಸೂಚಿಗಳನ್ನು ಮೀರಿ ಎನ್ ಟಿ ಪಿ ಸಿ ಲಿಮಿಟೆಡ್ ಗೆ ಹೆಚ್ಚಿನ ಅಧಿಕಾರ ನೀಡಲು ಅನುಮೋದನೆ ನೀಡಿದೆ. ಇದು ಅಂಗಸಂಸ್ಥೆಯಾದ ಎನ್ ಟಿ ಪಿ ಸಿ ಗ್ರೀನ್ ಎನರ್ಜಿ ಲಿಮಿಟೆಡ್ (ಎನ್ ಜಿ ಇ ಎಲ್) ನಲ್ಲಿ ಹೂಡಿಕೆ ಮಾಡಲು ಅನುವು …

Read More »

ಮಕ್ಕಳ ಅಸಾಧಾರಣ ಸಾಧನೆಗಳನ್ನು ಆಚರಿಸಲು ನೀಡುವ ವಿಶಿಷ್ಟ ಮನ್ನಣೆಯಾದ ʻಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ-2025ʼ ಪ್ರಶಸ್ತಿಗೆ ಅರ್ಜಿ ಸಲ್ಲಿಸಲು ಜುಲೈ 31 ಕೊನೆಯ ದಿನಾಂಕವಾಗಿದೆ

ʻಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ-2025ʼ(PMRBP) ಪ್ರಶಸ್ತಿಗಳಿಗೆ ನಾಮನಿರ್ದೇಶನಗಳಿಗಾಗಿ ಕರೆಯನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವು ಪುನರುಚ್ಚರಿಸುತ್ತಿದೆ. ಪ್ರಶಸ್ತಿಗಾಗಿ ಅರ್ಜಿಗಳ ಪಡೆಯುವಿಕೆ ಏಪ್ರಿಲ್ 1, 2025 ರಂದು ಆರಂಭವಾಗಿದ್ದು,  ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಜುಲೈ 31, 2025ಕ್ಕೆ ನಿಗದಿಪಡಿಸಲಾಗಿದೆ. ʻಪಿಎಂಆರ್‌ಬಿಪಿʼ ಪ್ರಶಸ್ತಿಗೆ ಎಲ್ಲಾ ನಾಮನಿರ್ದೇಶನಗಳನ್ನು https://awards.gov.in ಆನ್‌ಲೈನ್ ಪೋರ್ಟಲ್ ಮೂಲಕ ಸಲ್ಲಿಸಬೇಕು. ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ ಪ್ರಶಸ್ತಿಯು ಕ್ರೀಡೆ, ಸಮಾಜ ಸೇವೆ, ವಿಜ್ಞಾನ ಮತ್ತು ತಂತ್ರಜ್ಞಾನ, ಪರಿಸರ, ಕಲೆ …

Read More »

ಜೈವಿಕ ಉತ್ತೇಜಕಗಳ (ಬಯೋಸ್ಟಿಮ್ಯುಲಂಟ್) ಮಾರಾಟದ ಕುರಿತು ಕೇಂದ್ರ ಕೃಷಿ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಮಹತ್ವದ ಸಭೆ ನಡೆಸಿದರು

ಕೇಂದ್ರ ಕೃಷಿ, ರೈತರ ಕಲ್ಯಾಣ ಮತ್ತು ಗ್ರಾಮೀಣಾಭಿವೃದ್ಧಿ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅವರು ಇಂದು ನವದೆಹಲಿಯ ಕೃಷಿ ಭವನದಲ್ಲಿ ಕೃಷಿ ಸಚಿವಾಲಯ ಮತ್ತು ಭಾರತೀಯ ಕೃಷಿ ಸಂಶೋಧನಾ ಮಂಡಳಿಯ (ಐಸಿಎಆರ್) ಹಿರಿಯ ಅಧಿಕಾರಿಗಳೊಂದಿಗೆ ಜೈವಿಕ ಉತ್ತೇಜಕಗಳ (ಬಯೋಸ್ಟಿಮ್ಯುಲಂಟ್)  ಮಾರಾಟಕ್ಕೆ ಸಂಬಂಧಿಸಿದಂತೆ ಮಹತ್ವದ ಸಭೆ ನಡೆಸಿದರು. ಜೈವಿಕ ಉತ್ತೇಜಕಗಳ ವಿಷಯದಲ್ಲಿ ರೈತರನ್ನು ಯಾವುದೇ ರೀತಿಯಲ್ಲಿ ದಾರಿ ತಪ್ಪಿಸಬಾರದು ಎಂದು ಹೇಳಿದರು. ಯಾವುದೇ ಅನುಮೋದನೆಗಳನ್ನು ನೀಡುವಾಗ ರೈತರ ಹಿತಾಸಕ್ತಿಗಳನ್ನು ಗಮನದಲ್ಲಿಟ್ಟುಕೊಳ್ಳುವಂತೆ …

Read More »

ನವದೆಹಲಿಯಲ್ಲಿ ನಡೆದ ಇಂಡಿಯಾ ಪೋಸ್ಟ್‌ ಬಿಸಿನೆಸ್‌ ಮೀಟ್ 2025-26ರಲ್ಲಿ ಕೇಂದ್ರ ಸಚಿವರಾದ ಶ್ರೀ ಜ್ಯೋತಿರಾದಿತ್ಯ ಎಂ. ಸಿಂಧಿಯಾ ಅವರು ತಳಮಟ್ಟದ ಚಾಲಿತ ಬೆಳವಣಿಗೆಯ ದೃಷ್ಟಿಕೋನವನ್ನು ಪಟ್ಟಿ ಮಾಡಿದರು

ಕೇಂದ್ರ ಸಂವಹನ ಮತ್ತು ದೂರಸಂಪರ್ಕ ಸಚಿವರಾದ ಶ್ರೀ ಜ್ಯೋತಿರಾದಿತ್ಯ ಎಂ. ಸಿಂಧಿಯಾ ಅವರ ನೇತೃತ್ವದಲ್ಲಿ ಅಂಚೆ ಇಲಾಖೆ ತನ್ನ ವಾರ್ಷಿಕ ವ್ಯವಹಾರ ಸಭೆ 2025-26 ಅನ್ನು ನವದೆಹಲಿಯಲ್ಲಿಆಯೋಜಿಸಿತ್ತು. ಈ ಕಾರ್ಯತಂತ್ರದ ಸಭೆಯು ಇಂಡಿಯಾ ಪೋಸ್ಟ್‌ನ ವ್ಯವಹಾರ ರೂಪಾಂತರದ ಮಾರ್ಗಸೂಚಿ ಮತ್ತು ಪ್ರೀಮಿಯಂ ಲಾಜಿಸ್ಟಿಕ್ಸ್‌ ಮತ್ತು ನಾಗರಿಕ-ಕೇಂದ್ರಿತ ಸೇವಾ ಪೂರೈಕೆದಾರರಾಗಿ ಅದರ ವಿಕಸನದ ಪಾತ್ರದ ಬಗ್ಗೆ ಚರ್ಚಿಸಲು ದೇಶಾದ್ಯಂತದ ವಲಯಗಳ ಮುಖ್ಯಸ್ಥರನ್ನು ಒಟ್ಟುಗೂಡಿಸಿತು. 2025-26ನೇ ಸಾಲಿನ ವ್ಯಾಪಾರ ಸಭೆಯನ್ನುದ್ದೇಶಿಸಿ ಕೇಂದ್ರ ಸಚಿವರಾದ ಶ್ರೀ ಜ್ಯೋತಿರಾದಿತ್ಯ …

Read More »

ಮಕ್ಕಳ ಆಧಾರ್‌ ಬಯೋಮೆಟ್ರಿಕ್ಸ್‌ ನವೀಕರಿಸಲು ಪೋಷಕರು ಮತ್ತು ಸಂರಕ್ಷಣಕಾರರನ್ನು ಯು.ಐ.ಡಿ.ಎ.ಐ ಒತ್ತಾಯಿಸಿದೆ. 5 ರಿಂದ 7 ವರ್ಷದೊಳಗಿನ ಮಕ್ಕಳಿಗೆ ಉಚಿತ

ಏಳು ವರ್ಷ ತುಂಬಿದ ಆದರೆ ಆಧಾರ್‌ನಲ್ಲಿ ತಮ್ಮ ಬಯೋಮೆಟ್ರಿಕ್ಸ್‌ಅನ್ನು ಇನ್ನೂ ನವೀಕರಿಸದ ಮಕ್ಕಳಿಗೆ ಕಡ್ಡಾಯ ಬಯೋಮೆಟ್ರಿಕ್‌ ನವೀಕರಣ (ಎಂ.ಬಿ.ಯು) ಪೂರ್ಣಗೊಳಿಸುವ ಮಹತ್ವವನ್ನು ವಿಶಿಷ್ಟ ಗುರುತಿನ ಪ್ರಾಧಿಕಾರ (ಯು.ಐ.ಡಿ.ಎ.ಐ) ಪುನರುಚ್ಚರಿಸಿದೆ. ಇದು ಆಧಾರ್‌ ಅಡಿಯಲ್ಲಿ ಅಸ್ತಿತ್ವದಲ್ಲಿರುವ ಅವಶ್ಯಕತೆಯಾಗಿದ್ದು, ಪೋಷಕರು ಅಥವಾ ಸಂರಕ್ಷಣಕಾರರು ತಮ್ಮ ಮಗುವಿನ ವಿವರಗಳನ್ನು ಯಾವುದೇ ಆಧಾರ್‌ ಸೇವಾ ಕೇಂದ್ರ ಅಥವಾ ಗೊತ್ತುಪಡಿಸಿದ ಆಧಾರ್‌ ಕೇಂದ್ರದಲ್ಲಿ ನವೀಕರಿಸಬಹುದು. ಎಂ.ಬಿ.ಯು ಅಭ್ಯಾಸವನ್ನು ಪೂರ್ಣಗೊಳಿಸಲು ಯು.ಐ.ಡಿ.ಎ.ಐ ಅಂತಹ ಮಕ್ಕಳ ಆಧಾರ್‌ನಲ್ಲಿ ನೋಂದಾಯಿಸಲಾದ ಮೊಬೈಲ್‌ …

Read More »

2026ನೇ ಸಾಲಿನ ಪದ್ಮ ಪ್ರಶಸ್ತಿಗೆ ಜುಲೈ 31ರವರೆಗೆ ಅರ್ಜಿ ಸಲ್ಲಿಕೆ

2026ರ ಗಣರಾಜ್ಯೋತ್ಸವದ ಸಂದರ್ಭದಲ್ಲಿ ಘೋಷಿಸಲಾಗುವ ಪದ್ಮ ಪ್ರಶಸ್ತಿಗಳು -2026 ಗಾಗಿ ನಾಮನಿರ್ದೇಶನಗಳು / ಶಿಫಾರಸುಗಳು 2025ರ ಮಾರ್ಚ್‌ 15 ರಂದು ಪ್ರಾರಂಭವಾಗಿವೆ. ಪದ್ಮ ಪ್ರಶಸ್ತಿಗೆ ನಾಮನಿರ್ದೇಶನ ಮಾಡಲು 2025ರ ಜುಲೈ 31 ಕೊನೆಯ ದಿನಾಂಕವಾಗಿದೆ. ಪದ್ಮ ಪ್ರಶಸ್ತಿಗಳಿಗೆ ನಾಮನಿರ್ದೇಶನಗಳು / ಶಿಫಾರಸುಗಳನ್ನು ರಾಷ್ಟ್ರೀಯ ಪುರಸ್ಕಾರ ಪೋರ್ಟಲ್‌  (https://awards.gov.in)  ನಲ್ಲಿಆನ್‌ಲೈನ್‌ನಲ್ಲಿ ಮಾತ್ರ ಸ್ವೀಕರಿಸಲಾಗುತ್ತದೆ. ಪದ್ಮ ಪ್ರಶಸ್ತಿಗಳಾದ ಪದ್ಮ ವಿಭೂಷಣ, ಪದ್ಮಭೂಷಣ ಮತ್ತು ಪದ್ಮಶ್ರೀ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಲ್ಲಿಒಂದಾಗಿದೆ. 1954 ರಲ್ಲಿಸ್ಥಾಪಿಸಲಾದ ಈ ಪ್ರಶಸ್ತಿಗಳನ್ನು ಪ್ರತಿವರ್ಷ ಗಣರಾಜ್ಯೋತ್ಸವದ …

Read More »

ಭಾರತೀಯ ಸೃಜನಶೀಲ ತಂತ್ರಜ್ಞಾನ ಸಂಸ್ಥೆಯು (ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಕ್ರಿಯೇಟಿವ್ ಟೆಕ್ನಾಲಜಿ) ಆಗಸ್ಟ್, 2025 ರಿಂದ ಪ್ರಾರಂಭವಾಗುವ ಮೊದಲ ಬ್ಯಾಚ್‌ ಗಾಗಿ ಎವಿಜಿಸಿ-ಎಕ್ಸ್‌ ಆರ್‌ ನಲ್ಲಿ ಅತ್ಯಾಧುನಿಕ ಕೋರ್ಸ್‌ ಗಳನ್ನು ಪ್ರಕಟಿಸಿದೆ

ಭಾರತೀಯ ಸೃಜನಶೀಲ ತಂತ್ರಜ್ಞಾನ ಸಂಸ್ಥೆ (ಐಐಸಿಟಿ) ಈ ಆಗಸ್ಟ್‌ನಲ್ಲಿ ತನ್ನ ಮೊದಲ ಬ್ಯಾಚ್‌ ನ ವಿದ್ಯಾರ್ಥಿಗಳಿಗೆ ಪ್ರವೇಶವನ್ನು ಪ್ರಾರಂಭಿಸುತ್ತಿರುವುದರಿಂದ ಭಾರತದ ಉದಯೋನ್ಮುಖ ಡಿಜಿಟಲ್ ಮತ್ತು ಸೃಜನಶೀಲ ಆರ್ಥಿಕತೆಯು ಕ್ರಾಂತಿಕಾರಿ ಬದಲಾವಣೆಗೆ ಸಜ್ಜಾಗಿದೆ. ಸಂಸ್ಥೆಯು ಎವಿಜಿಸಿ-ಎಕ್ಸ್‌ ಆರ್‌ (ಅನಿಮೇಷನ್, ವಿಷುಯಲ್ ಎಫೆಕ್ಟ್ಸ್, ಗೇಮಿಂಗ್, ಕಾಮಿಕ್ಸ್ ಮತ್ತು ವಿಸ್ತೃತ ರಿಯಾಲಿಟಿ) ವಲಯದಲ್ಲಿ ಉದ್ಯಮ-ಚಾಲಿತ ಕೋರ್ಸ್‌ ಗಳ ಬಲವಾದ ಪೋರ್ಟ್‌ಫೋಲಿಯೊವನ್ನು ನೀಡುತ್ತದೆ. ಈ ಸಂಸ್ಥೆಯನ್ನು ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವರಾದ ಶ್ರೀ ಅಶ್ವಿನಿ …

Read More »

ಪ್ರಧಾನಮಂತ್ರಿ ಆಕಾಂಕ್ಷಿ ಜಿಲ್ಲೆಗಳಿಗೂ ರಾಷ್ಟ್ರೀಯ ಹೆದ್ದಾರಿಗಳನ್ನು ಸಂಪರ್ಕ ಕಲ್ಪಿಸಲು ಯೋಜನೆ: ಶ್ರೀ ನಿತಿನ್ ಗಡ್ಕರಿ

ಕೇಂದ್ರ ಭೂ ಸಾರಿಗೆ ಮತ್ತು ಹೆದ್ದಾರಿ ಸಚಿವರಾದ ಶ್ರೀ ನಿತಿನ್ ಗಡ್ಕರಿ ಅವರು ಕರ್ನಾಟಕದ ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ಇಂದು ಎರಡು ಸಾವಿರದ ನಲವತ್ತೆರೆಡು ಕೋಟಿ ರೂಪಾಯಿ ವೆಚ್ಚದ ಒಂಬತ್ತು ವಿವಿಧ ರಾಷ್ಟ್ರೀಯ ಹೆದ್ದಾರಿ  ಯೋಜನೆಗಳಿಗೆ ಚಾಲನೆ ನೀಡಿ, ಶಂಕುಸ್ಥಾಪನೆ ನೆರವೇರಿಸಿದರು. ಈ ವೇಳೆ ಕೇಂದ್ರ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಹಾಗು ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವರಾದ ಶ್ರೀ ಪ್ರಲ್ಹಾದ್ ಜೋಶಿ, ಲೋಕಸಭಾ ಸದಸ್ಯರಾದ …

Read More »

ಭಾರತದ ರಾಷ್ಟ್ರಪತಿ ಅವರಿಂದ ರಾಜ್ಯಸಭೆಗೆ ನಾಮನಿರ್ದೇಶನಗೊಂಡ ಗಣ್ಯ ವ್ಯಕ್ತಿಗಳಿಗೆ ಪ್ರಧಾನಮಂತ್ರಿ ಅಭಿನಂದನೆ

ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಭಾರತದ ರಾಷ್ಟ್ರಪತಿ ಅವರಿಂದ ರಾಜ್ಯಸಭೆಗೆ ನಾಮನಿರ್ದೇಶನಗೊಂಡಿರುವ ನಾಲ್ವರು ಗಣ್ಯ ವ್ಯಕ್ತಿಗಳಿಗೆ ಹೃತ್ಪೂರ್ವಕ ಅಭಿನಂದನೆಗಳು ಮತ್ತು ಶುಭ ಹಾರೈಕೆಗಳನ್ನು ಸಲ್ಲಿಸಿದ್ದಾರೆ. ಸಾಮಾಜಿಕ ಮಾಧ್ಯಮ ವೇದಿಕೆ ‘ಎಕ್ಸ್’ ನಲ್ಲಿ ಸರಣಿ ಪೋಸ್ಟ್ ಗಳಲ್ಲಿ, ಪ್ರಧಾನಮಂತ್ರಿ ಅವರು ಪ್ರತಿಯೊಬ್ಬ ನಾಮನಿರ್ದೇಶಿತರ ಕೊಡುಗೆಗಳನ್ನು ಬಿಂಬಿಸಿದ್ದಾರೆ. ಶ್ರೀ ಉಜ್ವಲ್ ನಿಕಮ್ ಅವರು ಕಾನೂನು ವೃತ್ತಿಗೆ ನೀಡಿದ ಅನುಕರಣೀಯ ಭಕ್ತಿ ಮತ್ತು ಸಾಂವಿಧಾನಿಕ ಮೌಲ್ಯಗಳಿಗೆ ಅಚಲ ಬದ್ಧತೆಯನ್ನು ಪ್ರಧಾನಿ ಶ್ಲಾಘಿಸಿದರು. …

Read More »

ರಸಗೊಬ್ಬರದ ಗುಣಮಟ್ಟವನ್ನು ಖಚಿತಪಡಿಸಿಕೊಳ್ಳಲು ಅಭಿಯಾನವನ್ನು ನಡೆಸುವಂತೆ ರಾಜ್ಯಗಳಿಗೆ ಕೇಂದ್ರ ಸರ್ಕಾರದ ಸೂಚನೆ

ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿರುವ ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವರು ನಕಲಿ ಮತ್ತು ಕಳಪೆ ಗುಣಮಟ್ಟದ ರಸಗೊಬ್ಬರಗಳ ವಿರುದ್ಧ ತಕ್ಷಣ ಮತ್ತು ಕಠಿಣ ಕ್ರಮ ಕೈಗೊಳ್ಳುವಂತೆ ನಿರ್ದೇಶಿಸಿದ್ದಾರೆ. ದೇಶಾದ್ಯಂತ ನಕಲಿ ರಸಗೊಬ್ಬರಗಳ ಮಾರಾಟ, ಸಬ್ಸಿಡಿ ರಸಗೊಬ್ಬರಗಳ ಕಾಳದಂಧೆ ಮತ್ತು ಬಲವಂತದ ಟ್ಯಾಗಿಂಗ್ ನಂತಹ ಕಾನೂನುಬಾಹಿರ ಚಟುವಟಿಕೆಗಳನ್ನು ತಡೆಯುವ ಉದ್ದೇಶದಿಂದ ಈ ಪತ್ರವನ್ನು ಬರೆಯಲಾಗಿದೆ. ಕೃಷಿಯು ಭಾರತದ ಆರ್ಥಿಕತೆಯ ಬೆನ್ನೆಲುಬು ಮತ್ತು ರೈತರ …

Read More »